ಇಂದು ಮಾಜಿ ಸಚಿವ  ರಮಾನಾಥ ರೈ ಹಾಗೂ ಕೆಪಿಸಿಸಿ ಸಂಯೋಜಕ ನಂದಕುಮಾರ್ ಸುಳ್ಯ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ

0

 

 

ಮಾಜಿ ಸಚಿವ ಬಿ ರಮಾನಾಥ ರೈ ಯವರು ಹಾಗೂ ಕೆಪಿಸಿಸಿ ಸಂಯೋಜಕ ನಂದಕುಮಾರ್ ರವರು ತೀವ್ರ ಮಳೆ ಹಾನಿಯಿಂದ ಮತ್ತು ಜಲಸ್ಪೋಟದಿಂದ ತತ್ತರಿಸಿರುವ ಸುಳ್ಯ ತಾಲೂಕಿನ ಗ್ರಾಮಗಳಾದ ಹರಿಹರ ಪಳ್ಳತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಸಂಪಾಜೆ ಪ್ರದೇಶಕ್ಕೆ ಇಂದು  ಆ. 11ರಂದು  ಗುರುವಾರ ಪೂ.11.00ಗಂಟೆಯಿಂದ ಭೇಟಿ ನೀಡಲಿದ್ದಾರೆ. 11:00ಗಂಟೆಗೆ ಸುಬ್ರಮಣ್ಯ, ಕಲ್ಮಕ್ಕಾರು, ಕೊಲ್ಲಮೊಗರು, ಹರಿಹರ ಪಳ್ಳತಡ್ಕ, ಬಾಳುಗೋಡು ಹಾಗೂ ಕಲ್ಲುಗುಂಡಿ, ಸಂಪಾಜೆ ಪ್ರದೇಶದ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಿದ್ದಾರೆ.

ಈ ಸಂದರ್ಭದಲ್ಲಿ ಅವರೊಂದಿಗೆ ಸುಳ್ಯ ಬ್ಲಾಕ್ ನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಸಿ ಜಯರಾಮ್ ತಿಳಿಸಿದ್ದಾರೆ.