ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಆಚರಣೆ

0

 

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನವನ್ನು ಆ.11ರಂದು ಆಚರಿಸಲಾಯಿತು.

 

ಸುಳ್ಯದ ಆರಕ್ಷಕ ಠಾಣೆ, ಕಲ್ಲುಗುಂಡಿ ಆರಕ್ಷಕ ಹೊರಠಾಣೆ, ಕಡಬ ಆರಕ್ಷಕ ಠಾಣೆ, ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಕಲ್ಲುಗುಂಡಿ ನೆರೆಹಾನಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ರಾಖಿ ಕಟ್ಟಿ ಸಿಹಿಹಂಚಲಾಯಿತು.


ಈ ಸಂದರ್ಭದಲ್ಲಿ ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ ಉಳುವಾರು, ಶ್ರೀಮತಿ ಭಾರತಿ ಪುರುಷೋತ್ತಮ, ಶ್ರೀಮತಿ ಶೀಲಾ ಕುರುಂಜಿ, ಶ್ರೀಮತಿ ಶೋಭಾ ಚಿದಾನಂದ, ಶ್ರೀಮತಿ ಕಿಶೋರಿ ಶೇಟ್, ದೇವಕಿ, ಕಾವ್ಯ, ಅರಂತೋಡು ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.