ಶೇಣಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ, ರಾಷ್ಟ್ರಧ್ವಜ ಬಳಕೆ ಮತ್ತು ವಿತರಣೆ

0

 

ಅಮರಪಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆಯನ್ನು ಅಮರಮೂಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ ನೀಡಿ ಶಾಲಾಮಕ್ಕಳ ಪೋಷಕರಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಚೂಂತಾರು ರವರು ರಾಷ್ಟ್ರಧ್ವಜದ ಮಹತ್ವ, ಬಳಕೆ ಮತ್ತು ಸರ್ಕಾರದ ಸುತ್ತೋಲೆಯ ಮಾಹಿತಿ ನೀಡಿದರು. ಉಪಸ್ಥಿತರಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್ ರವರು ಸರ್ಕಾರಿ ನಿಯಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೀನಾಕ್ಷಿ ಚೂಂತಾರು, ಸೀತಾ ಹೆಚ್, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಮಾಧವ ಗೌಡ ಪಿಂಡಿಬನ, ಮುಖ್ಯ ಗುರುಗಳಾದ ಪ್ರಭಾಕರ ಮಾಡಬಾಕಿಲು, ಪಂಚಾಯತ್ ಸಿಬ್ಬಂದಿಗಳಾದ ವಸಂತ, ಯಶವಂತ, ಆಶಾ ಕಾರ್ಯಕರ್ತೆ ರತ್ನಾವತಿ ಜನಾರ್ದನ, ಶಾಲಾ ಶಿಕ್ಷಕರು ರಂಗಯ್ಯ, ಸವಿತಾ, ಮಂಗಳ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಪ್ರಭಾಕರ ಮಾಡಬಾಕಿಲು ಸ್ವಾಗತಿಸಿ ವಂದಿಸಿದರು.