ಗುತ್ತಿಗಾರು: ಧರ್ಮಸ್ಥಳದಿಂದ ಮಾಸಾಶನ ವಿತರಣೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸುಳ್ಯ ತಾಲೂಕು , ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಕಂಚಾಲ್ತಿ ಎಂಬವರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ನಿರ್ಗತಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟ ಪಡುತ್ತಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ನಿರ್ಗತಿಕರ ಮಾಸಾಶನ ತಿಂಗಳಿಗೆ ರೂಪಾಯಿ 750  ಧರ್ಮಸ್ಥಳದಿಂದ ಮಂಜೂರಾಗಿದ್ದು ಈ ಮೊತ್ತವನ್ನು ತಾಂತ್ರಿಕ ತರಬೇತುದಾರರಾದ ಜನಾರ್ಧನ .ಡಿ .ಜೆ ಯವರು ಹಸ್ತಾಂತರಿಸಿದರು.


ಈ ಸಂದರ್ಭ ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀ ಲೋಕೇಶ್ವರ ಡಿ ಆರ್ ನಗದು ಸಂಗ್ರಾಹಕರಾದ ಶ್ರೀಮತಿ ಪುಷ್ಪಾ, ಕುl ದೀಕ್ಷಿತಾ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಕೇಶ್ ಮೆಟ್ಟಿನಡ್ಕ , ನಗದು ಸಹಾಯಕರಾದ ಜಗದೀಶ್ ಪೈಕ , ಸುಧೀರ್ ನಡುಮನೆ ಉಪಸ್ಥಿತರಿದ್ದರು.