ತೊಡಿಕಾನ ಗ್ರಾಮದ ಪಾತೆಟ್ಟಿ ಕೋನಗುಂಡಿ ಪಯಶ್ವಿನಿ ನದಿಯ ಬದಿಯಲ್ಲಿ ವಾಸವಾಗಿರುವ ಸುಮಾರು ಐದು ಮನೆಗಳವರು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು ಅವರಿಗೆ ಕಿಟ್ ವಿತರಿಸಲಾಯಿತು.
ಕೆಪಿಸಿಸಿ ಸಂಯೋಜಕ ನಂದಕುಮಾರ್ ಐದು ಬಡ ಕುಟುಂಬಗಳಿಗೆ ದಾನ ರೂಪದಲ್ಲಿ ಆಹಾರ ಕಿಟ್ ಗಳನ್ನು ನೀಡಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ರವರ ಉಪಸ್ಥಿತಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಕಿಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಅಡ್ಯಡ್ಕ ದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಕೂಡಾ ನಡೆಯಿತು. ಅಣ್ಣ ದೊರೈ ತೊಡಿಕಾನ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.