ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ನಡೆದ ವಾಣಿಜ್ಯ ಉತ್ಸವದಲ್ಲಿ ಸುಬ್ರಹ್ಮಣ್ಯ  ಕೆ ಎಸ್ ಎಸ್ ಮಹಾವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

0

ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ನಡೆದ ವಾಣಿಜ್ಯ ಉತ್ಸವದಲ್ಲಿ ಸುಬ್ರಹ್ಮಣ್ಯ  ಕೆ ಎಸ್ ಎಸ್ ಮಹಾವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ ದೊರೆತಿದೆ.

ಆ.12ರಂದು  ವಿವೇಕಾನಂದ ಕಾಲೇಜು ಪುತ್ತೂರು ಸ್ನಾತಕೋತ್ತರ ವಾಣಿಜ್ಯ ಪದವಿಯ ವತಿಯಿಂದ ಆಯೋಜಿಸಿದ್ದ
‘VYOM 2K22’ ಎಂಬ ವಾಣಿಜ್ಯ ಉತ್ಸವದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 11 ವಿದ್ಯಾರ್ಥಿಗಳು ಭಾಗವಹಿಸಿದ್ದರು .
6 ಸ್ಪರ್ಧೆಗಳನ್ನು ಒಳಗೊಂಡಿದ್ದ ಈ ಸ್ಪರ್ಧೆಯಲ್ಲಿ ಅಂತಿಮ ವಾಣಿಜ್ಯ ಪದವಿಯ
ವಿಶ್ವಾಸ್ ರಾವ್ ಮತ್ತು ಹೇಮಂತ್ ( Marketing , ಪ್ರಥಮ )
ಸನತ್ ಎ ಎಸ್ ಮತ್ತು ಶ್ರೇಯ ಕೆ ಎಸ್ ( Finance , ಪ್ರಥಮ )
ಜೀವನ್ ಕೆ ಮತ್ತು ಅನ್ವಿತ್ ಕೆ ವಿ ( Innovation, ಪ್ರಥಮ )
ಸ್ಥಾನ ಪಡೆದುಕೊಳ್ಳುವುದರ ಜೊತೆಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.