ಪಂಜಿಕಲ್ಲು : ಸ್ವಾತಂತ್ರ್ಯ ಅಮೃತೋತ್ಸವದ ಧ್ವಜಾರೋಹಣ

0

 

 

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಕಾರ್ಯಕ್ರಮದನ್ವಯ ಆ. 13 ರಿಂದ 15 ರವರೆಗೆ ನಡೆಸಲ್ಪಡುರವ ಮನೆ ಮನೆ ಧ್ವಜಾರೋಹಣ ಉತ್ಸವದಂತೆ ಇಂದು ಪಂಜಿಕಲ್ಲು ಸಹಕಾರಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಮುಂಭಾಗ ಆ. 13ರಂದು ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಪಂಜಿಕಲ್ಲು ಅಡಿಕೆ ಖರೀದಿ ಕೇಂದ್ರದ ಕಟ್ಟಡ ಮಾಲಕ ಕ್ಯಾಂಪ್ಕೋ ಕೇಂದ್ರದ ಹಿರಿಯ ಸದಸ್ಯ ಪೆರುಂಬಾರು ವಿಷ್ಣುಭಟ್ಟರು ಧ್ವಜಾರೋಹಣ ಮಾಡಿದರು.

ದೇಲಂಪಾಡಿ ಸೇವಾ ಸಹಕಾರಿ ಬ್ಯಾಕ್ ನ ಮಾಜಿ ಅಧ್ಯಕ್ಷ ಬೆಳ್ಳಿಪಾಡಿ ಸದಾಶಿವ ರೈ ಮಾತನಾಡಿ, ರಾಷ್ಟ್ರಕ್ಕೆ ಸ್ವಾತಂತ್ರವು ದೊರಕಲು ಹೋರಾಡಿದ ಮಹಾತ್ಮರ ಹಾಗೂ ರಾಷ್ಟ್ರಧ್ವಜದ ಮಹತ್ವ ಮತ್ತು ದೇಶದ ಅಖಂಡತೆಯ ಕುರಿತಾಗಿ ಗುಣಗಾನ ಮಾಡಿದರು.

ಬ್ರಾಂಚ್ ಮೇನೇಜರ್ ಕೆ.ಪಿ. ಸ್ವಾಗತಿಸಿದರು. ಸುಪರ್‌ವೈಸರ್ ಯತೀಶ್ ಕುಮಾರ್ ಜೆ, ಕಾರ್ಯಕ್ರಮ ನಿರೂಪಿಸಿದರು. ಅಡೂರು ಬ್ರಾಂಚ್ ಮೇನೇಜರ್ ಜೀವನ್ ಯನ್.ವಿ. ಹಾಗೂ ಶ್ರೀ ಶೈಲ ಎಂಟ‌ ಪ್ರೈಸಸ್‌ನ ಸಂಚಾಲಕ ಸೂರ್ಯನಾರಾಯಣ ಪ್ರಸಾದ್ ಉಪಸ್ಥಿತರಿದ್ದರು.
ಸಂಸ್ಥೆಯ ಸಹಾಯಕ ಕೃಷ್ಣನ್‌ ಜಾಲ್ಸೂರು ವಂದಿಸಿದರು.

LEAVE A REPLY

Please enter your comment!
Please enter your name here