ಐವರ್ನಾಡು: ಯುವಶಕ್ತಿ ಸಂಘದ ವಾರ್ಷಿಕ ಮಹಾಸಭೆ

0

ರೂ.40,000 ಧನಸಹಾಯ ಹಸ್ತಾಂತರ

ಯುವಶಕ್ತಿ ಸಂಘ ಐವರ್ನಾಡು ಇದರ ವಾರ್ಷಿಕ ಮಹಾಸಭೆಯು ಆ.13 ರಂದು ಐವರ್ನಾಡು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಳೆದ ವರ್ಷದಂತೆ ಈ ಬಾರಿ ಯಾವುದೇ ಬದಲಾವಣೆಗಳಿಲ್ಲದೆ ಆಡಳಿತ ಸಮಿತಿ ಪದಾಧಿಕಾರಿಗಳನ್ನು ಮುಂದುವರಿಸಲಾಯಿತು.
ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ, ಅಧ್ಯಕ್ಷರಾಗಿ ಪ್ರಮೋದ್ ಮುಚ್ಚಿನಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಕೊಚ್ಚಿಯವರನ್ನು ಮುಂದುವರಿಸಲಾಯಿತು.
ಈ ಬಾರಿಯ ಶಾರದಾ ಪೂಜಾ ಮಹೋತ್ಸವವನ್ನು ಅ.1ರಂದು ನಡೆಸುವುದಾಗಿ ನಿರ್ಣಯಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ದರ್ಮರಣಕ್ಕೀಡಾದ ಸಂಘದ ಸದಸ್ಯ ದಯಾನಂದ ನಾಟಿಕೇರಿಯವರ ತಾಯಿ ಶ್ರೀಮತಿ ಲಲಿತ ರಾಮಪ್ಪ ನಾಟಿಕೇರಿಯವರಿಗೆ ಯುವಶಕ್ತಿ ಸಂಘದ ವತಿಯಿಂದ ರೂ.40,00 ಧನ ಸಹಾಯ ವಿತರಿಸಲಾಯಿತು.