ಅರಂತೋಡು ಗ್ರಾ. ಪಂ.,ವಿವಿಧ ಸಂಘ ಸಂಸ್ಥೆಯ ಅಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ

0

ಸ್ವಾತಂತ್ರ್ಯ ಭಾರತದ 75 ನೇ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ‘ಹರ್ ಘರ್ ತಿರಂಗಾ’ಎಂಬ ಘೋಷ ವಾಕ್ಯದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ವೈಭವದ ಸಂಭ್ರಮವನ್ನು ಅರಂತೋಡು ಗ್ರಾಮ ಪಂಚಾಯತ್ ,ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಸುದ್ದಿ ಸಮೂಹ ಸಂಸ್ಥೆ ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು,ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ದುರ್ಗಾ ಮಾತಾ ಸಂಜೀವಿನಿ ಒಕ್ಕೂಟ,ಅರಂತೋಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವುಗಳ ಸಹಯೋಗದೊಂದಿಗೆ 75 ನೇ ಅಮೃತ ಮಹೋತ್ಸವವು ಅರಂತೋಡು ಸಿರಿ ಸೌಧ ದಲ್ಲಿ ನಾಳೆ ಆ.15 ರಂದು ನಡೆಯಲಿದೆ.ಬೆಳಿಗ್ಗೆ ಅರಂತೋಡು ಪಂಚಾಯತ್ ವಠಾರದಿಂದ ಹೊರಟ ವಾಹನ ಜಾಥ ಬಿಳಿಯಾರು ಪೆಟ್ರೋಲ್ ಬಂಕ್ ತನಕದವರೆಗೆ ಹೋಗಿ ಅರಂತೋಡು ನೆಹರು ಸ್ಮಾರಕ ಕಾಲೇಜು ತನಕ ಬಂದು ಅಲ್ಲಿಂದ ಶಾಲಾ ಮಕ್ಕಳ ಮೆರವಣಿಗೆಯಲ್ಲಿ ಸೇರಿಕೊಂಡು ಪಂಚಾಯತ್ ವಠಾರಕ್ಕೆ ಬರಲಿದೆ.ಪಂಚಾಯತ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಆದಮೇಲೆ ಸಿರಿಸೌಧ ದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ,ಸಾಮಾಜಿಕ ಕಾರ್ಯಕರ್ತ ಎಂ.ಬಿ.ಸದಾಶಿವ ,ಸಂತೋಷ್ ಕುತ್ತಮೊಟ್ಟೆ,ಮಹೇಶ್ ,ಸುಧೀರ್ ನೆಕ್ರಾಜೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ, ಶಿವಾನಂದ ಕುಕ್ಕುಂಬಳ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಆರ್.ಜಯಪ್ರಕಾಶ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.