ಸುಳ್ಯ ಎನ್ನೆoಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ

0

 

ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗ ಮಯೂರಿ ಕಲಾ ಶಾಲೆ ಪ್ರಸ್ತುತ ಪಡಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಸಿದ ‘ಜನ ಗಣ ಮನ’ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅಭಿಜ್ಞಾ ಎನ್ ಎಂ. ದ್ವಿತೀಯ ಸ್ಥಾನ, ಸುದ್ದಿ ಸಮೂಹ ಸಂಸ್ಥೆ ಮತ್ತು ಸಜ್ಜನ ಪ್ರತಿಷ್ಟಾನ ಬೀಜದ ಕಟ್ಟೆ ಇವರು ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಗೌತಮ್ ಪಿ ದ್ವಿತೀಯ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಕೃತಿ ಜಿ ರಾವ್ ದ್ವಿತೀಯ ಸ್ಥಾನ ಹಾಗೂ ನಗರ ಪಂಚಾಯತ್ ವತಿಯಿಂದ ನಡೆದ ರಾಷ್ಟ್ರ ಗೀತೆ, ಧ್ವಜ ಗೀತೆ ಮತ್ತು ವಂದೇ ಮಾತರಂ ಗೀತೆ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಮೋಕ್ಷಿತ ಎನ್ ಎಸ್ ತೃತೀಯ ಸ್ಥಾನ ಗಳಿಸಿದ್ದಾರೆ.