ಅನ್ಸಾರಿಯಾದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಗ್ರಾಂಡ್ ಅಸೆಂಬ್ಲಿ

0

 

 

ಭವ್ಯ ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವು ಅನ್ಸಾರಿಯಾ ಎಜುಕೇಶನ್ ಸೆಂಟರ್ ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ಜನತಾರವರ ಧ್ವಜಾರೋಹಣದಿಂದ ಆರಂಭಗೊಂಡು ಮಸೀದಿ ಖತೀಬರಾದ ಉಮರ್ ಮುಸ್ಲಿಯಾರ್ ಮರ್ದಾಳ ದುಅಗೈದರು. ಸಂಸ್ಥೆಯ ವಿಧ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮಗಳು ಆಕರ್ಷಣೀಯವಾಯಿತು. ಕಾರ್ಯಕ್ರಮದಲ್ಲಿ ಗಾಂಧಿನಗರ ಕೇಂದ್ರ ಮಸೀದಿ ಅಧ್ಯಕ್ಷರಾದ ಹಾಜಿ ಮುಸ್ತಫಾ ಜನತಾ, ಪ್ರ. ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್, ಸಂಸ್ಥೆಯ ಪ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ನಿರ್ದೇಶಕರುಗಳಾದ ಎಸ್. ಪಿ ಅಬ್ದುಲ್ ಹಮೀದ್, ಎನ್. ಅಬ್ದುಲ್ ಖಾದರ್, ಅಬ್ದುಲ್ ಹಮೀದ್ ಜನತಾ,ಕೆ.ಎಸ್ ಉಮರ್, ಮಿರಾಝ್, ಅಡ್ವೋಕೇಟ್ ಶರೀಫ್, ದಅವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕರ್ ಹಿಮಮಿ ಸಖಾಫಿ, ವ್ಯವಸ್ಥಾಪಕರಾದ ಮುಹಮ್ಮದ್ ಉವೈಸ್ ಬೀಟಿಗೆ ಮದ್ರಸ ಮುಖ್ಯ ಶಿಕ್ಷಕರಾದ ನೌಶಾದ್ ಮದನಿ, ಶರೀಅತ್ ಕಾಲೇಜು ಪ್ರಾಂಶುಪಾಲರಾದ ಸಯ್ಯದ್ ಹುಸೈನ್ ಸಅದಿ ತಂಙಳ್, ಹಿಫ್ಳುಲ್ ಕುರ್ ಆನ್ ಅಧ್ಯಾಪಕರಾದ ಹಾಫಿಳ್ ಅಬ್ದುಲ್ ಮಜೀದ್ ಸಖಾಫಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಹಾಗೂ ಸಂಸ್ಥೆಯ ಅಧೀನದ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಿದರು. ದಅವಾ ಕಾಲೇಜು ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಸ್ವಲಾಹುದ್ದೀನ್ ಅಯ್ಯೂಬ್ ಸ್ವಾಗತಿಸಿ, ಅಧ್ಯಾಪಕರಾದ ಹಂಝ ಮುಈನಿ ವಂದಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಅಬ್ದುಲ್ಲಾ ಹಿಮಮಿ ಸಖಾಫಿ ನಿರೂಪಿಸಿದರು.