ಕೊಲ್ಲಮೊಗ್ರ: ಶ್ರೀ ಕ್ಷೇ. ಧ. ಗ್ರಾ.ಯೋ. ಒಕ್ಕೂಟದ ತ್ರೈಮಾಸಿಕ ಸಭೆ

0

 

ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಗೌರವಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಕೊಲ್ಲಮೊಗ್ರ ‘ಬಿ’ ಒಕ್ಕೂಟದ ತ್ರೈಮಾಸಿಕ ಸಭೆಯು ಆ.14 ರಂದು ಕೊಲ್ಲಮೊಗ್ರ ಶ್ರೀ ಮಯೂರ ಕಲಾಮಂದಿರದಲ್ಲಿ ಜರುಗಿತು. ಆ.1 ರಂದು ಸಂಭವಿಸಿದ ಪ್ರಕೃತಿ ವಿಕೋಪದ ಬಳಿಕ ಆ ಪ್ರದೇಶಗಳಲ್ಲಿ ದುಡಿದು ಸೇವ ನೀಡಿದ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ರಾಷ್ಟ್ರಧ್ವಜ ನೀಡಿ ಗೌರವಿಸಲಾಯಿತು.

 

ವಲಯ ಮೇಲ್ವಿಚಾರಕ ರಾಜೇಶ್, ಬಿ ಒಕ್ಕೂಟದ ಅಧ್ಯಕ್ಷೆ ಇಂದಿರಾ ದೋಲನಮನೆ,ಸೇವಾ ಪ್ರತಿನಿಧಿ ಶೋಭಾ, ಹಾಗೂ ಎಲ್ಲಾ ಪ್ರಗತಿ ಬಂಧು ತಂಡಗಳ ,ಸ್ವಸಹಾಯ ಸಂಘಗಳ , ಜ್ಞಾನ ವಿಕಾಸ ಸಂಘಗಳ ಸದಸ್ಯರು, ಪದಾಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ ಸತೀಶ್ ಟಿ ಯನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇತ್ತೀಚೆಗೆ ಪ್ರಕೃತಿ ವಿಕೋಪದ ಸಂಭವಿಸಿದ ಪ್ರದೇಶದಲ್ಲಿ ಮರ ತೆರವು ಮಾಡಲು ಸೇವೆ ಸಲ್ಲಿಸುತ್ತಿದ್ದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಕುಶಾಲಪ್ಪ ಗೌಡ ಜಾಲುಮನೆ ರವರ ಕಾಲಿಗೆ ಮರ ಕತ್ತರಿಸುವ ಯಂತ್ರ ತಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಭೆ ಬಳಿಕ ಅವರ ಮನೆಗೆ ಒಕ್ಕೂಟದ ವತಿಯಿಂದ ಭೇಟಿಯಾಗಿ ಅವರಿಗೆ ರಾಷ್ಟ್ರ ಧ್ವಜ ನೀಡಿ ಗೌರವಿಸಲಾಯಿತು.ಈ ವೇಳೆ ಒಕ್ಕೂಟದ ಅಧ್ಯಕ್ಷೆ ಇಂದಿರಾ ದೋಲನಮನೆ, ಉಪಾಧ್ಯಕ್ಷ ಹೇಮಂತ ದೋಲನಮನೆ, ಸದಸ್ಯರಾದ ಹರೀಶ್ ಬಳ್ಳಢ್ಕ,ಸುಮತಿ ಚಾಳೆಪ್ಪಾಡಿ, ಕಾರ್ತಿಕ್,ಹರ್ಷ,ಸೇವಾ ಪ್ರತಿನಿಧಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.