ಧವನ್ ದೇವರಗುಂಡ ಗೆ ಛದ್ಮವೇಷ ಸ್ಪರ್ಧೆಯಲ್ಲಿ ಬಹುಮಾನ

0

 


ಮುಳಿಯ ಜ್ಯುವೆಲರ್ಸ್ ಪುತ್ತೂರು ಇವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ 8-12ವರ್ಷದ ವಯೋಮಿತಿಯ ವಿಭಾಗದವರಿಗಾಗಿ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ಛದ್ಮ ವೇಷ ಸ್ಪರ್ಧೆಯಲ್ಲಿ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿ ಧವನ್ ದೇವರಗುಂಡ ತೃತೀಯ ಸ್ಥಾನ ಗಳಿಸಿದ್ದಾರೆ. ಒಟ್ಟು 87 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಪ್ರತಿಭೆ ಮಂಡೆಕೋಲು ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ದೇವರಗುಂಡ, ಹಾಗೂ ಸುಳ್ಯ ಎನ್ನೆoಸಿಯ ಉಪನ್ಯಾಸಕಿ ರೇಷ್ಮಾ ನಾಗೇಶ್ ದಂಪತಿಯ ಪುತ್ರ.