ಚೆಂಬು : ಶ್ರೀ ಭಗವಾನ್ ಸಂಘದಿಂದ ವಿಶೇಷ ಚೇತನರಿಗೆ ವಾಕರ್ ಕೊಡುಗೆ

0

 

 

75 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚೆಂಬು ಶ್ರೀ ಭಗವಾನ್ ಸಂಘದಿಂದ ಸಂಪಾಜೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ವಿಶೇಷಚೇತನ  ಬಾಲಕೃಷ್ಣ ಆಚಾರಿಯವರಿಗೆ ನಡೆದಾಡಲು ವಾಕರ್ ನೀಡಿ ಸಹಕರಿಸಲಾಯಿತು.
ಮನೆಯನ್ನು ಮತ್ತೆ ವಾಸಯೋಗ್ಯವಾಗಿ ಮಾಡಿಕೊಡುವ ಭರವಸೆ ನೀಡಿ ಧೈರ್ಯ ತುಂಬಲಾಯಿತು.
ಸಂಘದ ಸದಸ್ಯರಾದ ಮಾಜಿ ಯೋಧ  ಯಶೋಧರ ಕಟ್ಟೆಮನೆ ಯವರು ವಾಕರ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಯಸ್ವಿನಿ ಸೊಸೈಟಿ ಸಿಇಓ ಶ ಆನಂದ.ಬಿ.ಕೆ ,ಸಂಘದ ಗೌರವಾದ್ಯಕ್ಷ  ಅನಂತ್ ಊರುಬೈಲು ,ಅದ್ಯಕ್ಷ  ಯತೀಶ್ ಹನಿಯಡ್ಕ ,ಕಾರ್ಯದರ್ಶಿ  ಹೊಸೂರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.