ಕಲ್ಮಡ್ಕ ಗ್ರಾಮ ವನ್ ಸೇವಾ ಕೇಂದ್ರ ದಲ್ಲಿ ಸ್ವಾತಂತ್ರ್ಯೋತ್ಸವ- ನಿವೃತ್ತ ಯೋಧ ಹೊನ್ನಪ್ಪ ಕಲ್ಮಡ್ಕರಿಗೆ ಗೌರವಾರ್ಪಣೆ

0

 

ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಡ್ಕದ ಕಜೆಯಲ್ಲಿರುವ ಭಟ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ವನ್ ಸೇವಾ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ನಿವೃತ್ತ ಯೋಧ ಹೊನ್ನಪ್ಪ ಕಲ್ಮಡ್ಕ ರಿಗೆ ಗೌರವಾರ್ಪಣೆ ನಡೆಯಿತು.


ಕಾರ್ಯಕ್ರಮವನ್ಬು ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿಗರಡಿಯ ಅನುವಂಶಿಕ ಮೊಕ್ತೇಸರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ದೀಪ ಬೆಳಗಿಸಿದರು. ಕಟ್ಟಡ ಮಾಲಕ ಹಾಗೂ ನ್ಯಾಯವಾದಿ ಕೇಶವ ಭೀಮಗುಳಿ, ಇನ್ಸೂರೆನ್ಸ್ ಸರ್ವೇಯರ್ ರಮೇಶ್ ಕೋಟೆ ಅಲೆಂಗಾರ, ಧಾರ್ಮಿಕ ಪರಿಷತ್ ಸದಸ್ಯ ರಘುನಾಥ ರೈ ಕಟ್ಟಬೀಡು,
ನಿವೃತ್ತ ಶಿಕ್ಷಕ ಎನ್.ಜಿ.ಶ್ರೀನಿವಾಸ ರೈ,ಹಿರಿಯ ಕೃಷಿಕರಾದ ಕುಶಾಲಪ್ಪ ಗೌಡ ಆಕ್ರಿಕಟ್ಟೆ, ತಾ.ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ‌.ಪ್ರಭಾಕರ ರೈ, ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಎನ್.ಜಿ.ಲೋಕನಾಥ ರೈ,ಗ್ರಾಮ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ, ಪಿಗ್ಮಿ ಸಂಗ್ರಹಕರಾದ ಸುಧಾಕರ ಕೊಚ್ಚಿ,ಹಿರಿಯರಾದ ಅಬ್ದುಲ್ಲ‌ ಜಿ‌.ಗುತ್ತಿಗೆ, ಉದ್ಯಮಿ ಜಯರಾಮ ರೈ, ನಿವೃತ್ತ ಪೋಲಿಸ್ ವೆಂಕಪ್ಪ ದಾಸ್,ಗ್ರಾಮ ಸಹಾಯಕ ಸೋಮಪ್ಪ ಮುರುಳ್ಯ,ಸುಧಿನ್ ಕುಮಾರ್ ರೈ ಗುತ್ತು, ಚಿತ್ರಲತಾ ರೈ ಪಟ್ಟೆ,ಕವಿತಾ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.ಗ್ರಾಮ ವನ್ ಪ್ರತಿನಿಧಿ ಧನ್ಯ ಆಕ್ರಿಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಜಿತ್ ರೈ ಪಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಿಬ್ಬಂದಿ ಸುಧಾ ದಾಸನಮಜಲು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.