SKSSF ಸುಣ್ಣಮೂಲೆ ಶಾಖಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ

0

 

 

SKSSF ಸುಣ್ಣಮೂಲೆ ಕನಕಮಜಲು ಶಾಖಾ ಸಮಿತಿ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವದ ಅಮೃತಮಹೋತ್ಸವವನ್ನು ಸುಣ್ಣಮೂಲೆ SKSSF ಶಾಖಾ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯವನ್ನು ಸುಣ್ಣಮೂಲೆ SKSSF ಶಾಖಾ ಅಧ್ಯಕ್ಷರಾದ ಹಕೀಮ್ BK ನೆರವೇರಿಸಿದರು.
ಸ್ಥಳೀಯBJM ಖತೀಬ್ ಬಹು ಹರ್ಷದ್ ಬಾಖವಿ ಉಸ್ತಾದ್ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯದ ಬಗ್ಗೆ ಲಘು ಉಪದೇಶ ನೀಡಿ. ಹರ್ ಘರ್ ತಿರಂಗವನ್ನು ಜಮಾಅತ್ ಸರ್ವರೂ ಅಳವಡಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ನಂತರ ಗ್ರಾಂ ಪಂಚಾಯತ್ ಸದಸ್ಯರಾದ ಜನಾಬ್ ಇಬ್ರಾಹಿಂ ಖಾಸಿಂ ರವರು ಕಾರ್ಯಕ್ರಮದ ಬಗ್ಗೆ ಹಿತನುಡಿಯನ್ನಾಡಿದರು.

ಈ ಸಂದರ್ಭದಲ್ಲಿ BJM ಅಧ್ಯಕ್ಷ ಪದಾಧಿಕಾರಿಗಳು. NIM ಮದರಸ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು. – SKSSF ಪದಾಧಿಕಾರಿಗಳು. ಜಮಾಅತರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಹಸೈನಾರ್ KC ಮತ್ತು ಮೊಯ್ದೀನ್ BK ಸಿಹಿತಿಂಡಿ ಪೂರೈಸಿದರು. ರಂಶಾದ್ SM ಸ್ವಾಗತಿಸಿ ನಿರೂಪಿಸಿದರು.