ಕಲ್ಕುಡ ದೈವಸ್ಥಾನದಲ್ಲಿ ಸುಳ್ಯ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ಬಿಡುಗಡೆ

0

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ಆ.29 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಸುಳ್ಯ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ನ್ನು ಆ.17 ರಂದು ಬಿಡುಗಡೆ ಮಾಡಲಾಯಿತು.

ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ರವರು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಕಾರ್ಯದರ್ಶಿ ಪ್ರಕಾಶ್ ಯಾದವ್, ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ, ಧರ್ಮದರ್ಶಿಗಳಾದ ಭಾಸ್ಕರ ಐಡಿಯಲ್,ಹರೀಶ್ ಬೂಡುಪನ್ನೆ,ಕೇಶವ ನಾಯಕ್ ಸುಳ್ಯ,ಸಮಿತಿ ಖಜಾಂಜಿ ರಂಜಿತ್,ಬಜರಂಗದಳ ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ ಹಾಗೂ ಸಂಘಟನೆಯ ಸದಸ್ಯರು,‌ಮತ್ತಿತರರು ಉಪಸ್ಥಿತರಿದ್ದರು.


ಸಂಘಟನೆಯ ಸದಸ್ಯರ ವಾಹನಗಳಿಗೆ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ನ್ನು ಅಧ್ಯಕ್ಷ ಹರೀಶ್ ರವರು ಅಂಟಿಸುವ ಮೂಲಕ ಚಾಲನೆ ನೀಡಿದರು.