ಧರ್ಮಪಾಲ ಬರೆಮೇಲು ನಿಧನ

0

 

ಪಂಜದ ಬರೆಮೇಲು ಬಾಬು ಗೌಡರ ಪುತ್ರ ಧರ್ಮಪಾಲ (53ವ)ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.17 ರಂದು ನಿಧನರಾದರು. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಅವರು ಪತ್ನಿ, ಮಗನೊಂದಿಗೆ ಅಲ್ಲಿಯೇ ವಾಸವವಾಗಿದ್ದರು.ಸುಮಾರು 7 ವರುಷಗಳ ಹಿಂದೆ ಅವರು ಕುಸಿದು ಬಿದ್ದು ತಲೆ ಒಳ‌ಭಾಗಕ್ಕೆ ಗಾಯವಾಗಿತ್ತು.ಬಳಿಕ ಚೇತರಿಕೆ ಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರು ಹೆಚ್ಚಾಗಿ ಅವರ ಪತ್ನಿಯ ತವರು ಮನೆ ವಿಟ್ಲದಲ್ಲಿ ವಾಸವಾಗಿದ್ದರು.ಆ.17 ರಂದು ಅವರು ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಅವರ ಆ.18 ಸ್ವಗೃಹ ಪಂಜದ ಬರೆಮೇಲು ನಲ್ಲಿ ಅಂತ್ಯಸಂಸ್ಕಾರ ಜರುಗಿತು.ಮೃತರು ತಂದೆ , ಪತ್ನಿ ಬೆಂಗಳೂರುನಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಯಶೋಲತಾ, ಪುತ್ರ ಸೋಹನ್, ಸಹೋದರರಾದ ಶಿಕ್ಷಕ ಕುಶಾಲಪ್ಪ, ಬೆಂಗಳೂರಿನ ಕಂಪನಿ ಉದ್ಯೋಗಿ ವಾಸುದೇವ , ಮೆಸ್ಕಾಂ ಸಿಬ್ಬಂದಿ ರಾಮಚಂದ್ರ, ವಸಂತ, ಸಹೋದರಿಯರಾದ ಶ್ರೀಮತಿ ಯಮುನಾ ಕುಶಾಲಪ್ಪ ನೆಟ್ಟಣ , ಶ್ರೀಮತಿ ರಾಜೀವಿ ವೆಂಕಪ್ಪ ಹುದೇರಿ ಕುಟುಂಬಸ್ಥರು, ಬಂಧು ಮಿತ್ರರನ್ನು ಆಗಲಿದ್ದಾರೆ‌.