ಬಾಳಿಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ, ಅಂಗನವಾಡಿ ಸಹಾಯಕಿ ವನಿತಾ ರೈಯವರಿಗೆ ಬಿಳ್ಕೊಡುಗೆ

0

 

 

ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ಅಂಗನವಾಡಿ ಸಹಾಯಕಿ ವನಿತಾ ರೈ ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಗಸ್ಟ್ 18ರಂದು ಬಾಳಿಲ
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು .


ಅಂಗನವಾಡಿ ಮಕ್ಕಳಿಗೆ ಶ್ರೀಕೃಷ್ಣನ ವೇಷ ಸ್ಪರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳಿಲ ಗ್ರಾ.ಪಂ. ಅಧ್ಯಕ್ಷರಾದ ಸವಿತ ಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಬಾಳಿಲ ಅ ಅಂಗನವಾಡಿ ಸಹಾಯಕಿ ವನಿತಾ ರೈ ಇವರ ಬೀಳ್ಕೊಡುಗೆ ಹಾಗು ಸನ್ಮಾನ ಕಾರ್ಯಕ್ರಮ ಜರಗಿತು. ಬಾಳಿಲ ಗ್ರಾ.ಪಂ. ಉಪಾದ್ಯಕ್ಷರಾದ ತ್ರಿವೇಣಿ ವಿಶ್ವೇಶ್ವರ, ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕರಾದ ಪಿ.ಜಿ.ಯಸ್.ಎನ್ ಪ್ರಸಾದ್, ಅಂಗನವಾಡಿ ಮೇಲ್ವಿಚಾರಕಿ ರವಿಶ್ರೀ ಕೆ ಮತ್ತು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಪುಷ್ಪಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು ,ಶ್ರೀಕೃಷ್ಣ ಸೇವಾಸಮಿತಿಯ ಸದಸ್ಯರು ಹಾಗು ಪೋಷಕರು ಉಪಸ್ಥಿತಿತರಿದ್ದರು.
ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಕಾರ್ಯಕರ್ತೆ ದಯಾನಂದಿನಿ ಸ್ವಾಗತಿಸಿ ಸರಿತಾ ಕಂಡಿಕಟ್ಟ ವಂದಿಸಿದರು.