ಸಂಪಾಜೆ ಪ್ರಾ.ಕೃ‌.ಪ.ಸ.ಸಂಘದ ವತಿಯಿಂದ ಮರಣನಿಧಿ ಹಸ್ತಾಂತರ

0

 

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ಮಾಜಿ ನೌಕರರಾದ , ಇತ್ತೀಚೆಗೆ ಮೃತಪಟ್ಟ ಬಾಚಿ ಗದ್ದೆ ಸೀತಾರಾಮ ರವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹತ್ತು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರಾದ ಗಣಪತಿ ಭಟ್ ಪಿ ಎನ್ ಹಾಗೂ ಯಮುನಾ ಬಿ ಎಸ್ ರವರು ಹಾಜರಿದ್ದರು.