ಕಲ್ಮಡ್ಕ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

 

 

ಕಲ್ಮಡ್ಕ ಗ್ರಾಮ ಪಂಚಾಯತ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಪಂಚಶ್ರೀ ಯುವಕ ಮಂಡಲ, ಪಂಬೆತ್ತಾಡಿ ಇದರ ಸಹಯೋಗದೊಂದಿಗೆ ಆ. 19 ರಂದು ಕರಿಕ್ಕಳದಿಂದ ಪಂಬೆತ್ತಾಡಿಯವರೆಗೆ ರಸ್ತೆ ಬದಿಯ ಕಳೆಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕೆ.ಎಸ್, ಸದಸ್ಯರಾದ ಪವಿತ್ರ ಕುದ್ವ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ ಇದರ ಅಧ್ಯಕ್ಷರಾದ ನಾಗಪ್ಪ ಗೌಡ ಪಂಜದಬೈಲು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜದ ಅಧ್ಯಕ್ಷ ವಿಶ್ವನಾಥ ಸಂಪ ಹಾಗೂ ಸದಸ್ಯರಾದ ಶ್ರೀನಿವಾಸ ಮಲ್ಲೇಟ್ಟಿ, ವಿನಯಕುಮಾರ್ ಕರಿಕ್ಕಳ, ಶ್ರೀಹರ್ಷ ಮಡಜವಾಳಮಜಲು, ಧರ್ಮಪಾಲ ಕಣ್ಕಲ್ ಹಾಗೂ ಪಂಚಶ್ರೀ ಯುವಕ ಮಂಡಲ ಸದಸ್ಯರಾದ ದಿನೇಶ್ ಪಿ, ಸುಂದರ ಪಿ, ದೇವಿಪ್ರಸಾದ್ ಪಿ, ದಿನೇಶ್ ಪಾಟಾಜೆ, ರಾಜೇಶ್ ಮಲ್ಲೇಟ್ಟಿ, ದೀಕ್ಷಿತ್, ಪದ್ಮನಾಭ ಕರಿಕ್ಕಳ, ದಿನೇಶ್ ಕರಿಕ್ಕಳ, ಪುರಂದರ ಕರಿಕ್ಕಳ, ಇವರಗಳು ಭಾವಹಿಸುದರು. ಸ್ವಚ್ಛತಾ ಕಾರ್ಯಕ್ರಮಕ್ಕೆ ಉಪಾಹಾರದ ವ್ಯವಸ್ಥೆಯನ್ನು ದಿಲೀಪ್ ಬಾಬ್ಲುಬೆಟ್ಟು, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗ್ರಾ. ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ.ಎಸ್ ಮಾಡಿದರು. ಮೆಷಿನ್ ವ್ಯವಸ್ಥೆಯನ್ನು ರಜಿತ್ ಭಟ್ ಪಂಜಬೀಡು ಹಾಗೂ ದಯಾನಂದ ಜಾಕೆ ಮಾಡಿದರು.