ಕನಕಮಜಲು ಶ್ರೀ ಆತ್ಮರಾಮ ಭಜನಾ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

 

ಕನಕಮಜಲಿನ ಶ್ರೀ ಆತ್ಮರಾಮ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಆ.19ರಂದು ಜರುಗಿತು.


ಅಷ್ಟಮಿಯ ಅಂಗವಾಗಿ 36 ಮಂದಿ ಬಾಲಕೃಷ್ಣರ ವೇಷ ಪ್ರದರ್ಶನ ಶ್ರೀ ಆತ್ಮಾರಾಮ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊರಂಬಡ್ಕ,ಸದಸ್ಯರುಗಳಾದ
ಜಗನ್ನಾಥ ಕಾಪಿಲ,
ಕುಸುಮಾದರ ಬೊಮ್ಮಟ್ಟಿ ಜಯಪ್ರಸಾದ್ ಕಾರಿಂಜ ,
ವಿಜಯಕುಮಾರ ನರಿಯೂರು ರವಿಚಂದ್ರ ಕನ್ನಡ್ಕ ಮೂಲೆ, ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ, ದಾಮೋದರ್ ಗೌಡ ಕೋಡ್ತೀಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಶ್ರೀಧರ ಕುತ್ಯಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ರವಿಚಂದ್ರ ಕಾಪಿಲ ,ಯುವಕ ಮಂಡಲದ ಪದಾಧಿಕಾರಿಗಳಾದ ಹರಿಪ್ರಸಾದ್ ಮಾಣಿಕೋಡಿ, ಹರ್ಷಿತ್ ಉಗ್ಗಮೂಲೆ ಸಂಯೋಜಿಸಿದ್ದರು.