ಸಾಮಾಜಿಕ ಕಾರ್ಯಕರ್ತ ತ್ರಿಶೂಲ್ ವಿರುದ್ಧ ನ.ಪ. ಅಧ್ಯಕ್ಷರ ಪೊಲೀಸ್ ದೂರು ಪ್ರಜಾಪ್ರಭುತ್ವ ವಿರೋಧಿ: ಆಮ್ ಆದ್ಮಿ ಪಾರ್ಟಿ

0

ಸುಳ್ಯ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಹೊಂಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಜನ ಜಾಗೃತಿ ಮಾಡಿದ ಸಾಮಾಜಿಕ ಕಾರ್ಯಕರ್ತ, ಕಲಾವಿದ ಆರ್ ಜೆ ತ್ರಿಶೂಲ್ ವಿರುದ್ಧ ಪೊಲೀಸ್ ದೂರು ನೀಡಿದ್ದು ನಗರ ಪಂಚಾಯತ್ ಅಧ್ಯಕ್ಷರ ಪ್ರಜಾಪ್ರಭುತ್ವ ವಿರೋಧಿ ದೋರಣೆಯಾಗಿದ್ದು, ಆಮ್ ಆದ್ಮಿ ಪಾರ್ಟಿ ಇದನ್ನು ಕಟುವಾಗಿ ಖಂಡಿಸುತ್ತದೆ ಎಂದು ಸುಳ್ಯ ನಗರ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ರಾಮಕೃಷ್ಣ ಬೀರಮಂಗಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಯ ನಗರದಲ್ಲಿ ಆಡಳಿತದ ಅವ್ಯವಸ್ಥೆಯನ್ನು ಸಾಮಾಜಿಕ ಕ್ಷೇತ್ರದ ಹಲವಾರು ಮೇರು ವ್ಯಕ್ತಿಗಳು ಧ್ವನಿ ಎತ್ತಿದ್ದಾರೆ. ಅವರ ಧ್ವನಿ ಅಡಗಿಸುವ ಪ್ರಯತ್ನ ಆಡಳಿತದಿಂದ ನಡೆಯುತ್ತಿರುವುದು ಅವರ ವೈಫಲ್ಯವನ್ನು ಮುಚ್ಚಿಹಾಕುವ ಹುನ್ನಾರದ ಭಾಗವಾಗಿದೆ. ಇಂತಹ ಜನಧ್ವನಿಯನ್ನು ಅಡಗಿಸುವ ಯತ್ನ ಯಶಸ್ವಿಯಾಗುವುದಿಲ್ಲ, ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿ ಜನಜಾಗೃತಿ ನಡೆಸುತ್ತದೆ ಮತ್ತು ಸಾಮಾಜಿಕ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.