ಸಜ್ಜನ ಪ್ರತಿಷ್ಠಾನದ ಕಾಳಜಿ ಕೇಂದ್ರಕ್ಕೆ ಬಶೀರ್ ಹರ್ಲಡ್ಕ ಭೇಟಿ

0

 

ಇತ್ತಿಚೆಗೆ ಸಂಪಾಜೆ ಕಲ್ಲುಗುಂಡಿ ಗೂನಡ್ಕ ಪರಿಸರದಲ್ಲಿ ಆದ ಪ್ರವಾಹದಿಂದ ಮನೆ ಹಾಗೂ ಸಮಾಗ್ರಿಗಳು ಕಳೆದುಕೊಂಡ ಕುಟುಂಬಗಳು ಆಶ್ರಯ ಪಡೆದಿರುವ ಸಜ್ಜನ ಪ್ರತಿಷ್ಠಾನದ ಕಾಳಜಿ ಕೇಂದ್ರಕ್ಕೆ ಬೆಂಗಳೂರಿನ ಗೋಕಲ್‌ದಾಸ್ ಇಮೆಜೆಸ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಬಷೀರ್ ಹರ್ಲಡ್ಕ ಭೇಟಿ ಕೊಟ್ಟು ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ‌ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಟಾನದ ಅಧ್ಯಕ್ಷರಾದ Dr ಉಮ್ಮರ್ ಬೀಜದಕಟ್ಟೆ , ನಿರ್ದೆಶಕರುಗಳಾದ ರಹೀಮ್ ಬೀಜದಕಟ್ಟೆ , ಸಲೀಂ ಪೆರುಂಗೋಡಿ , ಉದ್ಯಮಿ ಇಬ್ರಾಹಿಂ ಪೆರುಂಗೋಡಿ, ಅರಿಸ್ ಎನ್ಮೂರು , ಅಫ್ರಿದ್ ಪೆರುಂಗೋಡಿ ಹಾಗು ಶರೀಫ್ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು. ಚಂದ್ರವಿಲಾಸ ಎಲ್ಲರನ್ನು ಸ್ವಾಗತಿಸಿದರು .