ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಸುಳ್ಯದಲ್ಲಿ ಫೋಟೋಗ್ರಾಫರ್ ಸದಸ್ಯರಿಂದ ರಕ್ತದಾನ

0

 

 

 

183 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸುಳ್ಯ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ರಕ್ತದಾನ ಕಾರ್ಯಕ್ರಮ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಡೆಯಿತು.

 

ಕಾರ್ಯಕ್ರಮ ವನ್ನು ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ನೀಲಾಂಬಿಕೆ ನಟರಾಜನ್ ಹಾಗೂ ಬ್ಲಡ್ ಬ್ಯಾಂಕ್ ಆಫೀಸರ್ ಡಾ.ಮಹಂತದೇವರು ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಡಾ.ಸತ್ಯವತಿ ಆಳ್ವ, ಸುಳ್ಯ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ರಾವ್, ಗೌರವಾಧ್ಯಕ್ಷ ಪರಮ್ ಸುಳ್ಯ, ಛಾಯಾ ಕಾರ್ಯದರ್ಶಿ ಶಶಿ ಗೌಡ ಮತ್ತು ಸತೀಶ್ ಕೆ.ಜಿ., ವೆಂಕಟೇಶ್, ಪ್ರದೀಪ್ ಐವರ್ನಾಡು, ರಾಕೇಶ್ ಕನಕಮಜಲು, ಸುಮಂತ್ ಎನ್.ಎಸ್., ಚಂದು ಬೊಳಿಯಮಜಲು, ನವೀನ್ ಗೋಪಾಲ್ ಸ್ಟುಡಿಯೋ, ನಯನ ಸೋನಾ, ರಮೇಶ್ ಪ್ರೊಫೈಲ್ ಉಪಸ್ಥಿತರಿದ್ದರು.