ಪಂಜ:ಯುವಕ-ಯುವತಿ ಮಂಡಲಗಳ ವತಿಯಿಂದ ಕೆಸರ್ ದ ಪರ್ಬ-ಉದ್ಘಾಟನೆ

0

 

ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ.ಕೆಸರ್ ದ ಪರ್ಬ ಕ್ರೀಡಾ ಕೂಟ ಅಳ್ಪೆ ಕುದ್ಕುಳಿ ಹಿಮಕರ ಇವರ ಗದ್ದೆಯಲ್ಲಿ ಜರುಗಿತು.

ಸುಬ್ರಹ್ಮಣ್ಯ ಅನುಗ್ರಹ ಕನ್ ಸ್ಟ್ರಕ್ಷನ್ ಮಾಲಕ ಡಾ|ರೋ| ರವಿ ಕಕ್ಕೆಪದವು ಉದ್ಘಾಟಿಸಿ ಮಾತನಾಡಿ “ಇಲ್ಲಿನ ಯುವಕ ಯುವತಿ ಮಂಡಲಗಳು ಒಗ್ಗಟ್ಟಿನಿಂದ ವಿಶೇಷವಾಗಿ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಗುರುತಿಸಿ ಕೊಂಡಿದೆ.

ಮರೆಯಾಗುತ್ತಿರುವ ಕೆಸರು ಗದ್ದೆ ಕ್ರೀಡೆಯನ್ನು ಮತ್ತೆ ಪರಿಚಯಿಸಿ ಬೆಳೆಸುವ ವಿಶೇಷ ಕಾರ್ಯ ಇಲ್ಲಿ ಆಗಿದೆ” ಎಂದು
ಶುಭಹಾರೈಸಿದರು.

ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಕೇಶವ ಕೋಟಿಯಡ್ಕ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪಂಜ ತೊಂಡಚ್ಚನ್ ಇಂಡಸ್ಟ್ರೀಸ್ ಮಾಲಕ ಮನು ಯಂ, ಮೈಸೂರು ಎನ್ ಆರ್ ಗ್ರೂಪ್ ನ ಪರ್ಚೆಸ್ ಅಸಿಸ್ಟೆಂಟ್ ಜನರಲ್ ಮೆನೇಜರ್ ಹಿಮಕರ ಕುದ್ಕುಳಿ ಶುಭ ಹಾರೈಸಿದರು. ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ವನಿತಾ ಕರಿಮಜಲು , ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಅಳ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕಡಪಲ ಪ್ರಾರ್ಥಿಸಿದರು.ಪ್ರಕಾಶ್ ಅಳ್ಪೆ ಸ್ವಾಗತಿಸಿದರು. ಗುರುಪ್ರಸಾದ್ ತೋಟ ಪ್ರಾಸ್ತಾವಿಕಗೈದರು.ಕೌಶಿಕ್ ಕುಳ ನಿರೂಪಿಸಿದರು.ಧನ್ಯ ಕೋಡಿ ವಂದಿಸಿದರು.ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.