ಟರ್ಕಿ ದೇಶದ ಇಸ್ತಾಂಬುಲ್ ಎಂಬಲ್ಲಿ ಆ.24ರಿಂದ 28ರವರೆಗೆ ನಡೆಯಲಿರುವ 47ನೇ APIMONDIA ಇಂಟರ್ ನ್ಯಾಶನಲ್ ಅಪಿಕಲ್ಚರಲ್ ಸಮಾವೇಶದಲ್ಲಿ ಶ್ರೇಯಸ್ ಊರುಬೈಲು ಭಾಗವಹಿಸಲಿದ್ದಾರೆ.
ಟರ್ಕಿಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾರತದಿಂದ ಕೆಲವೇ ಮಂದಿ ಮಾತ್ರ ಭಾಗವಹಿಸುವ ಅವಕಾಶ ಪಡೆದಿದ್ದು, ಕರ್ನಾಟಕದ ಇಬ್ಬರಲ್ಲಿ ಶ್ರೇಯಸ್ ಊರುಬೈಲು ಓರ್ವ ಆಗಿದ್ದಾರೆ.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮತ್ತು ಶೋಭಾ ಶಿವಾನಂದರವರ ಪುತ್ರರಾದ ಶ್ರೇಯಸ್ ಅವರು ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ bee venom ನ ರಿಸರ್ಚ್ ಮತ್ತು ಬ್ಯುಸಿನೆಸ್ ಮಾಡುತ್ತಿದ್ದಾರೆ.