ಒಡಿಯೂರು ಕ್ರೀಡೋತ್ಸವದ ಉಳಿಕೆ ಮೊತ್ತ ಅಶಕ್ತರಿಗೆ ಹಸ್ತಾಂತರ*

0

 

ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಒಡಿಯೂರು ಗ್ರಾಮ ವಿಕಾಸ ತಂಡದ ಕ್ರೀಡೋತ್ಸವದ ಉಳಿಕೆ ಹಣವನ್ನು ಅಶಕ್ತರಿಗೆ ನೀಡಲಾಯಿತು.

 

ನೆರವು ನೀಡುವ ಸಮಯದಲ್ಲಿ ಕ್ರೀಡೋತ್ಸವ ಸಮಿತಿಯ ಸುಳ್ಯ ತಾಲೂಕು ಸಂಚಾಲಕ ಜೆ.ಕೆ ರೈ, ಸುಳ್ಯ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಗೀತಾ ನೆಟ್ಟಾರು, ಪಂಜ ವಲಯ ಅಧ್ಯಕ್ಷ ಪ್ರೇಮಾನಂದ ರೈ ಪಂಜ, ಕಲ್ಲುಗುಂಡಿ ಘಟ ಸಮಿತಿ ಅಧ್ಯಕ್ಷ ಕೇಶವಾಚಾರ್ಯ, ಸೇವಾ ದೀಕ್ಷಿತೆ ರತ್ನಾವತಿ ಸಂಪಾಜೆ, ಸಂಯೋಜಕಿ ಶ್ರೀಮತಿ ರೇವತಿ, ಸುಳ್ಯ ತಾಲೂಕು ಘಟ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ರೇವತಿ ಐವರ್ನಾಡು ಮೊದಲಾದವರಿದ್ದರು.