ಅಮರಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಮೆರವಣಿಗೆ ಹಿನ್ನೆಲೆ

0

 

ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ಆ.22ರಂದು ಜಾಲ್ಸೂರಿನಲ್ಲಿ ಗ್ರಾಮಸ್ಥರ ಪೂರ್ವಭಾವಿ ಸಭೆ

 

ಅಮರಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಸಂಘಟನಾ ಚತುರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯು ಆಂದ್ರಪ್ರದೇಶದ ವಿಜಯವಾಡದಿಂದ ಸುಳ್ಯ ಮಾರ್ಗವಾಗಿ ಜಾಲ್ಸೂರು ಗ್ರಾಮದ ಮೂಲಕ ಮಂಗಳೂರಿಗೆ ಆ.29ರಂದು ಸಂಚರಿಸಲಿದ್ದು,
ಮೆರವಣಿಗೆಯನ್ನು ಸ್ವಾಗತಿಸುವ ಸಲುವಾಗಿ ಜಾಲ್ಸೂರು ಗ್ರಾಮಸ್ಥರ ಸಭೆಯು ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಆ.22ರಂದು ಅಪರಾಹ್ನ ಜರುಗಲಿದೆ.

ಸ್ವಾತಂತ್ರ್ಯ ಹೋರಾಟಗಾರನ ಕಂಚಿನ ಪ್ರತಿಮೆಯ ಮೆರವಣಿಗೆಯನ್ನು ಜಾಲ್ಸೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಲಾಗಿದ್ದು, ಗ್ರಾಮಸ್ಥರ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿದುಬಂದಿದೆ.