ಗೂನಡ್ಕ  : ಶ್ರೀ ಕೃಷ್ಣ ಗೆಳೆಯರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

 

 

ಗೂನಡ್ಕ ಶ್ರೀ ಶಾರದ ಶಾಲೆ ಆಟದ ಮೈದಾನದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್ ರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ವರದರಾಜ್ ಸಂಕೇಶ ,ಸಂಪಾಜೆ ಕೃಷಿ ಪತ್ತಿನ ಸರಕಾರಿ ಸಂಘ ಅಧ್ಯಕ್ಷರಾದ ಸೋಮಶೇಖರ್ ಕ್ಯೊಂಗಾಜೆ, ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ , ಲೋಕನಾಥ ಎಸ್.ಪಿ ಸಂಚಾಲಕರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ , ಜಿ.ರಾಮಚಂದ್ರ ಅಧ್ಯಕ್ಷರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ,ಚಿದಾನಂದ ಮಾಸ್ಟರ್ , ಗೋವರ್ಧನ ಸನತ್ ಎಸ್ .ಪಿ, , ಮುಂತಾದವರು ಉಪಸ್ಥಿತರಿದ್ದರು . ಉದ್ಘಾಟನಾ ಬಳಿಕ ಮಡಿಕೆ ಹೊಡೆಯುವುದು ,ಗುಂಡೆಸೆತ, ವಿಷವರ್ತುಲ , ಕಬಡ್ಡಿ , ಹಗ್ಗಜಗ್ಗಾಟ , ಪುಟಾಣಿಗಳಿಗೆ ಕೃಷ್ಣ ವೇಷ ಧರಿಸುವುದು ,ಬಾಲ್ ಎಸೆತ ಮುಂತಾದ ಸ್ಪರ್ಧೆಗಳು  ನಡೆಯಿತು.