ಸುಬ್ರಹ್ಮಣ್ಯ : ಚಾತುರ್ಮಾಸ್ಯ ವೃತದ ಪ್ರಯುಕ್ತ ಉಪನ್ಯಾಸ,  ಕರ್ನಾಟಕ ಶಾಸ್ತ್ರೀಯ ಸಂಗೀತ

0

 

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ 26 ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ ಸಾಂಸ್ಕೃತಿಕ ವೈಭವವಾಗಿ ಆ.21 ರಂದು ಸಂಕಲ್ಪ ದ ಮಹತ್ವ ಎಂಬ ವಿಷಯದ ಬಗ್ಗೆ ಸುಹಾಸ್ ಉಪಾಧ್ಯಾಯ ಉಪನ್ಯಾಸ ಮಾಡಿದರು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆದಿದ್ದು ನಿರಂಜನ್ ದಿಂಡೋಡಿ ಬೆಂಗಳೂರು, ಕಾರ್ತಿಕೇಯ ರಾಮಚಂದ್ರ ಬೆಂಗಳೂರು, ಮೃದಂಗಂ ಶ್ರೀನಿವಾಸ ಬೆಂಗಳೂರು, ಎನ್.ಫಣೀಂದ್ರ ಬೆಂಗಳೂರು ಇವರುಗಳು ಭಾಗವಹಿಸಿದ್ದರು.