ಐನೆಕಿದು: ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ

0

 

ನಿಸರ್ಗ ಯುವಕ ಮಂಡಲ ಐನೆಕಿದು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜ‌ನ್ಮಾಷ್ಠಮಿ ಪ್ರಯುಕ್ತ 7ನೇ ವರ್ಷದ ಮೊಸರು ಕುಡಿಕೆ,ದಾರ್ಮಿಕ ಉಪನ್ಯಾಸ ಹಾಗು ಸ್ಪರ್ಧಾ ಕಾರ್ಯಕ್ರಮ ಆ.21ರಂದು ಐನೆಕಿದುವಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅದ್ಯಕ್ಷೆ ಶೀ ಮತಿ ಲಲಿತ ಗುಂಡಡ್ಕ ರವರು ಉದ್ಘಾಟಿಸಿದರು. ಅಜಿತ್ ಕಲ್ಲೇರಿ ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭವಾನಿಶಂಕರ ಪೈಲಾಜೆ , ಭಾರತಿ ಮೂಕಮಲೆ, ಸೀತಾರಾಮ ಕಲ್ಲೇರಿ ವೇದಿಕೆಯಲ್ಲಿದ್ದರು. ಗಣರಾಜ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.

ಸಂಜೆ ಬಹುಮಾನ ವಿತರಿಸಲಾಯಿತು. ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್‍ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಗಿರೀಶ್ ಪೈಲಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೆಸ್ಕಾಂ ಕಿರಿಯ ಇಂಜಿನಿಯರ್ ಆಗಿ ಪಧೋನ್ನತಿಗೊಂಡ ವಸಂತ ಕುಮಾರ್ ಹಾಗೂ ನೀರಿಗೆ ಬಿದ್ದ ಕ್ರೇನ್ ಚಾಲಕರನ್ನು ರಕ್ಷಿಸಿದ ಸೋಮಶೇಖರ ಕಟ್ಟೆಮನೆ ಅವರನ್ನು ಸನ್ಮಾನಿಸಲಾಯಿತು.