ಪೈಚಾರು: ಬೇಕರಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಧರ್ಮದೇಟು

0

ಪೈಚಾರಿನ ಬೇಕರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯೊಂದಿಗೆ ವ್ಯಕ್ತಿಯೊಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ಆ.21ರಂದು ಸಂಜೆ ವರದಿಯಾಗಿದೆ.

ಮಹಿಳೆಯ ಕೈಹಿಡಿದೆಳೆದು ಅನುಚಿತವಾಗಿ ವರ್ತಿಸಿದ ಕುರಿತು ಶಾಂತಿನಗರ ನಿವಾಸಿ ಅಬ್ದುಲ್ಲ (ಅದ್ಲಂಜಿ) ಎಂಬ ವ್ಯಕ್ತಿಗೆ ಮಹಿಳೆಯ ಪತಿ ಹಾಗೂ ಸಾರ್ವಜನಿಕರು ಸೇರಿ ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.