ಕೂತ್ಕುಂಜ:ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

 

 

ಶಿವಾಜಿ ಯುವಕ ಮಂಡಲ ಕೂತ್ಕುಂಜ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಆ.21 ರಂದು ಕೂತ್ಕುಂಜ ಅಟಲ್ ‘ಜೀ ಕ್ರೀಡಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಪಂಜ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕಲ್ಲಾಜೆ ಉದ್ಘಾಟಿಸಿ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ವೆಂಕಟೇಶ್ವರ ಜೋಯಿಸ ಹೆಬ್ಬಾರಹಿತ್ಲು ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂದೀಪ್ ಪಲ್ಲೋಡಿ, ಪ್ರಗತಿಪರ ಕೃಷಿಕರು ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಧರ್ಮಪಾಲ ಗೌಡ ಕಕ್ಯಾನ , ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗಿಶ್ ಚಿದ್ಗಲ್ಲು,ಕಾರ್ಯದರ್ಶಿ ಶೈಲೇಶ್ ಕುಳ್ಳಾಜೆ, ಕಾರ್ಯಕ್ರಮ ಸಂಯೋಜಕ ಷಣ್ಮುಖ ಕಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ರಚನಾ ಚಿದ್ಗಲು ಪ್ರಾರ್ಥಿಸಿದರು. ಪುನೀತ್ ಚಿದ್ಗಲ್ಲು ಸ್ವಾಗತಿಸಿದರು.ಷಣ್ಮುಖ ಹೊಸೊಕ್ಲು ನಿರೂಪಿಸಿದರು. ಷಣ್ಮುಖ ಕಲ್ಲಾಜೆ ವಂದಿಸಿದರು.‌ ‌ಬಳಿಕ ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.
*ಸಮರೋಪ ಸಮಾರಂಭ* :
ಸಮರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಗತಿಪುರ ಕೃಷಿಕ ಭವಾನಿ ಶಂಕರ ದೇರಪ್ಪಜನ ಮನೆ, ಉದ್ಯಮಿ ರಾಧಾಕೃಷ್ಣ ಪೈಸಾರಿ, ಶ್ರೀಮತಿ ವಿಮಲಾ ಉದಯಕುಮಾರ್ ಚಿದ್ಗಲ್ಲು,ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗಿಶ್ ಚಿದ್ಗಲ್ಲು,
ಕಾರ್ಯಕ್ರಮ ಸಂಯೋಜಕ ಷಣ್ಮುಖ ಕಲ್ಲಾಜೆ
ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆದಿತ್ಯ ಚಿದ್ಗಲ್ಲು ಸ್ವಾಗತಿಸಿದರು.ಷಣ್ಮುಖ ಹೊಸೊಕ್ಲು ನಿರೂಪಿಸಿದರು.ಆದರ್ಶ ಚಿದ್ಗಲ್ಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಶೈಲೇಶ್ ವಂದಿಸಿದರು.