ಕರ್ಲಪ್ಪಾಡಿ ದೇವಸ್ಥಾನ ವ್ಯ.ಸಮಿತಿಗೆ ಗೌರವ ಸಲಹೆಗಾರರ ನೇಮಕ

0

 

 

 

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಗೌರವ ಸಲಹೆಗಾರರಾಗಿ ದೇವಸ್ಥಾನದ ವ್ಯಾಪ್ತಿಗೊಳಪಟ್ಟ ಮೂವರನ್ನು ನೇಮಕ ಮಾಡಲಾಗಿದೆ.

ನಿವೃತ್ತ ಕೆಎಸ್ಆರ್ಟಿಸಿ ಉದ್ಯೋಗಿ, ಕೃಷಿಕರಾಗಿರುವ ಕರುಣಾಕರ ಗೌಡ ಕೊಡೆಂಕಿರಿ, ಸುಳ್ಯ ಪಶು ಸಂಗೋಪನ ಇಲಾಖೆಯ ನಿವೃತ್ತ ಉದ್ಯೋಗಿ, ಕೃಷಿಕ ವಿಜಯ ಪಡ್ಡಂ ಬೈಲು ಹಾಗೂ ಎಲ್.ಐ.ಸಿ. ಪ್ರತಿನಿಧಿ, ಹಾಗೂ ಕೃಷಿಕ ಗುರುಪ್ರಸಾದ್ ರೈ ಪೇರಾಲುರನ್ನು ನೇಮಕಗೊಳಿಸಲಾಗಿದೆ. ಇತ್ತೀಚೆಗೆ ನಡೆದ ವ್ಯವಸ್ಥಾಪನ ಸಮಿತಿ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ರಾಜೇಶ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.