ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ವಾಗತಕ್ಕೆ ಸಿದ್ಧತೆಗಾಗಿ ಸುಬ್ರಹ್ಮಣ್ಯದಲ್ಲಿ ಸಭೆ

0

ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಯು ಆ.29ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ  ಹಿನ್ನೆಲೆಯಲ್ಲಿ ಆ.22 ರಂದು ಸುಬ್ರಹ್ಮಣ್ಯದಲ್ಲಿ ಸಿದ್ದತಾ ಸಭೆ ನಡೆಸಲಾಯಿತು.

ದಕ್ಷಿಣಕನ್ನಡ ಸಂಪಾಜೆ ಮೂಲಕ ಆಗಮಿಸುವ ಪ್ರತಿಮೆಯನ್ನು ಮಾಣಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಭರದ ಸಿದ್ಧತೆ ನಡೆಸಲಾಗಿದ್ದು ಸುಬ್ರಹ್ಮಣ್ಯ ವಲಯ ಸಮಿತಿ ಸಂಚಾಲಕರಾದ ಗಿರಿಧರ ಸ್ಕಂದ ಎಲ್ಲರ ಸಹಕಾರ ಕೋರಿ ಸಭೆ ನಡೆಸಿದರು. ಸುಬ್ರಹ್ಮಣ್ಯ ವಲಯ ಹಾಗೂ ಆಸುಪಾಸಿನಿಂದ ನೂರಾರು ವಾಹನಗಳು ಮಾಣಿಗೆ ತಲುಪಿ ಅಲ್ಲಿ ಅದ್ದೂರಿಯಾಗಿ ಸ್ವಾಗತಿಸುವುದು. ಸುಬ್ರಹ್ಮಣ್ಯದಿಂದ ಮಾಣಿಯವರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಅಲ್ಲಲ್ಲಿ ಹಾಕಲಾಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸುಬ್ರಹ್ಮಣ್ಯ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಬಿ ಎನ್ ,ವಲಯ ಸಮಿತಿಯ ಶಿವರಾಮ ಏನೆಕಲ್, ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು, ರಾಜೇಶ್ ಎನ್. ಎಸ್., ವೆಂಕಟೇಶ್ ಎಚ್. ಎಲ್. ಮತ್ತಿತರರು ಉಪಸ್ಥಿತರಿದ್ದರು. ಗಿರಿಧರ ಸ್ಕಂದ ಸ್ವಾಗತಿಸಿ, ಭರತ್ ನೆಕ್ರಾಜೆ ವಂದಿಸಿದರು.