ಕುಮಾರಧಾರದಿಂದ 1.5 ಕಿ.ಮೀ. ದೂರದಲ್ಲಿ ಪತ್ತೆ
ಆ.21 ರಂದು ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ಮುಳುಗಡೆಯಾಗಿದ್ದ ಮಂಡ್ಯದ ಯುವಕನ ಶವ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಇದೀಗ ಪತ್ತೆಯಾಗಿದೆ.
ಮಂಡ್ಯದ ಸ್ವಾಮಿ ಎಂಬ ಯುವಕ ಆ.21 ರಂದು ಕುಮಾರಧಾರ ಸ್ನಾನಘಟ್ಟದಲ್ಲಿ ಸ್ನಾನಕ್ಕಿಳಿದಿದ್ದ ವೇಳೆ ನಾಪತ್ತೆಯಾಗಿದ್ದ. ಮೂರು ದಿನಗಳಿಂದ ಅಗ್ನಿಶಾಮಕ ಹಾಗೂ ಈಜು ತಜ್ಞರ ತಂಡ ಹುಡುಕಾಟ ನಡೆಸಿದರೂ ಶವ ದೊರಕಿರಲಿಲ್ಲ. ಇದೀಗ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಮತ್ತು ರವಿ ಕಕ್ಕೆಪದವುರವರ ಸತತ ಪ್ರಯತ್ನದ ಫಲವಾಗಿ ಕುಮಾರಧಾರದಿಂದ ಒಂದೂವರೆ ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ರವಿ ಕಕ್ಕೆಪದವು, ಪ್ರಧಾನ್ ಕಟ್ಟೆಮನೆ, ಸೋಮಶೇಖರ ಕಟ್ಟೆಮನೆ, ನವೀನ ವಾಡ್ಯಪ್ಪನ ಮನೆ, ಧನ್ ರಾಜ್ ಕಿರಿಭಾಗ, ಕಾರ್ತಿಕ್ ವಾಡ್ಯಪ್ಪನ ಮನೆ, ಯೋಗೀಶ್ ಮೆತ್ತಡ್ಕ, ನಿತಿನ್ ಪರ್ವತಮುಖಿ ಈಜುಗಾರರಾಗಿ ಸಹಕರಿಸಿದರು.