ಚಿದಾನಂದ ಅಂಬೆಕಲ್ಲು ನಿಧನ

0

 

 

 

ಮುಪ್ಪೇರ್ಯ ಗ್ರಾಮದ ಕಾಪಡ್ಕ ನಿವಾಸಿ

ಪಂಜದ ಉದ್ಯಮಿ ಸುದ್ದಿ ಬಿಡುಗಡೆ ಪತ್ರಿಕೆಯ ಮತ್ತು ವಿವಿಧ ದಿನ ಪತ್ರಿಕೆಗಳ ಏಜೆಂಟ್ ರು ಚಿದಾನಂದ ಅಂಬೆಕಲ್ಲು ರವರು ಅಲ್ಪಕಾಲದ ಅಸೌಖ್ಯದಿಂದ ಆ.25 ರಂದು ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 58 ವರ್ಷ ವಯಸ್ಸಾಗಿತ್ತು.
ಅವರು ಬಿ ಎಸ್ ಎನ್ ಎಲ್ ಸಂಸ್ಥೆಯ ಸಿಬ್ಬಂದಿಯಾಗಿ ಸ್ವಯಂ ನಿವೃತ್ತಿ ಪಡೆದಿದ್ದರು.
ಪಂಜದ ವಿವಿಧ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಮೃತರು ಪತ್ನಿ ಶ್ರೀಮತಿ ಶಾರದಾ , ಪುತ್ರರಾದ ಶಿವಪ್ರಸಾದ್ ,ದುರ್ಗಾ ಪ್ರಸಾದ್ , ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.ಇಂದು ಮೃತರ ಸ್ವಗೃಹದಲ್ಲಿ ಅಂತ್ಯಸಂಸ್ಕಾರ ಜರುಗಲಿದೆ.