ಆ. 31: ತಂಟೆಪ್ಪಾಡಿ ಶಂಭಟ್ಟರ ಜೀವನ ಚರಿತ್ರೆ ಗ್ರಂಥ ಬಿಡುಗಡೆ

0

ಯಕ್ಷಗಾನ ಹಿಮ್ಮೇಳದ ಮದ್ದಳೆ ವಾದಕರಾಗಿ ಪ್ರಸಿದ್ಧಿಯನ್ನು ಪಡೆದಿದ್ದ ತಂಟೆಪ್ಪಾಡಿ ಶಂಭಟ್ಟರ ಜೀವನ ವೃತ್ತಾಂತವನ್ನೊಳಗೊಂಡ ತಂಟೆಪ್ಪಾಡಿ ಶಂಭಟ್ಟ ಗ್ರಂಥ ಅವರ ನೂರನೇ ಜನ್ಮದಿನವಾದ ಆ. 31ರಂದು ಸರೋಜಿನ ಪ್ರತಿಷ್ಠಾನದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಮುರಲಿಮೋಹನ್ ಚೂಂತಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.