ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಮಹಾಸಭೆ

0

 

ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ : ಶಿವಪ್ರಸಾದ್ ಆಲೆಟ್ಟಿ, ಪ್ರಧಾನ ಕಾರ್ಯದರ್ಶಿ : ರಮೇಶ್ ನೀರಬಿದಿರೆ, ಖಜಾಂಜಿ : ಜಯಶ್ರೀ ಕೊಯಿಂಗೋಡಿ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಮಹಾಸಭೆಯು ಇಂದು ಮಧ್ಯಾಹ್ನ ಸುಳ್ಯದ ರಂಗ ಮಯೂರಿ ಕಲಾಮಂದಿರದಲ್ಲಿ ನಡೆಯಿತು. ಅಧ್ಯಕ್ಷ ಜೆ.ಕೆ. ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾ ಜೊತೆ ಕಾರ್ಯದರ್ಶಿ ಈಶ್ವರ್ ವಾರಣಾಸಿ, ತಾಲೂಕು ಘಟಕದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿದ್ದರು. ಶಿವಪ್ರಸಾದ್ ಆಲೆಟ್ಟಿ ವರದಿ ವಾಚಿಸಿದರು. ಯಶ್ವಿತ್ ಕಾಳಂಮನೆ ಸ್ವಾಗತಿಸಿದರು. ರಮೇಶ್ ನೀರಬಿದಿರೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


ನೂತನ ಪದಾಧಿಕಾರಿಗಳ ಆಯ್ಕೆ

ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜೆ.ಕೆ. ರೈ, ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಆಲೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ನೀರಬಿದಿರೆ, ಖಜಾಂಜಿಯಾಗಿ ಜಯಶ್ರೀ ಕೊಯಿಂಗೋಡಿ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಗಣೇಶ್ ಕುಕ್ಕುದಡಿ, ಪೂಜಾಶ್ರೀ ವಿತೇಶ್ ಕೋಡಿ , ಜೊತೆ ಕಾರ್ಯದರ್ಶಿಯಾಗಿ ವೆಂಕಟೇಶ್ ಮೇನಾಲ, ಕುಶಾಂತ್ ಕೊರತ್ಯಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಕೆ.ಟಿ. ಭಾಗೀಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೀರ್ತಿ ಹೊದ್ದೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ವಿನಯ್ ಜಾಲ್ಸೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯಶ್ವಿತ್ ಕಾಳಂಮನೆ, ಉಮೇಶ್ ಮಣಿಕ್ಕಾರ, ಈಶ್ವರ್ ವಾರಣಾಸಿ, ಶ್ರೀಧರ್ ಕಜೆಗದ್ದೆ, ಶರೀಫ್ ಜಟ್ಟಿಪಳ್ಳ, ಶಿವರಾಮ ಕಜೆಮೂಲೆ, ಅನಿಲ್ ಕಳಂಜ, ವಿನಯ ಕಲ್ಮಡ್ಕ, ಶ್ರೀಧಾಮ ಅಡ್ಕಾರ್, ರಕ್ಷಿತ್ ಆನೆಕಾರ, ರಶೀದ್ ಬೆಳ್ಳಾರೆ, ಮಧು ಪಂಜ, ಸಂಕಪ್ಪ ಸಾಲ್ಯಾನ್, ಸುಹಾಸ್ ಸುಳ್ಳಿ, ರೇಖಾ ಸುಭಾಶ್,  ದಯಾಮಣಿ ಹೇಮಂತ್, ಗಾಯತ್ರಿ ಪ್ರಶಾಂತ್, ಮಂಜುನಾಥ ಪೈ ಆಯ್ಕೆಯಾದರು.

ಶಿವಪ್ರಸಾದ್ ಆಲೆಟ್ಟಿ

ರಮೇಶ್ ನೀರಬಿದಿರೆ


ಜಯಶ್ರೀ ಕೊಯಿಂಗೋಡಿ