ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ವತಿಯಿಂದ ನಡೆದ ಲೇಖನ ಸ್ಪರ್ಧೆಯ ವಿಜೇತರು

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ‘೧೮೩೭ರ ಸಂದರ್ಭದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ, ಕೊಡಗು – ಕೆನರಾ ಬಂಡಾಯ’ ಎಂಬ ವಿಷಯದಲ್ಲಿ ಲೇಖನ ಸ್ಪರ್ಧೆ ನಡೆದಿದ್ದು, ವಿಜೇತರ ಪಟ್ಟಿ ಪ್ರಕಟಿಸಿದೆ.

ಪ್ರಥಮ : ಸೋಮವಾರಪೇಟೆ ಜಿ ಬಿ.ಟಿ.ಸಿ.ಜಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ. ಕಾಂ. ವಿದ್ಯಾರ್ಥಿ ನಿತಿನ್ ಎಸ್ , ದ್ವೀತಿಯ : ಪೊನ್ನಂಪೇಟೆ ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ. ಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಡೀನಾ ಕಿರಣ್ ಎಂ ಕೆ., ತೃತೀಯ : ನಾಪೋಕ್ಲು ಬಿ ಎ ಸರಕಾರಿ ಪ್ರಥಮ ದರ್ಜೆ ಕಾಲೇಜುನ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಸೀತಮ್ಮ ಕೆ ಆರ್., ಚತುರ್ಥ : ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲಿಂಗರಾಜು ಆರ್.ರವರಿಗೆ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.