ಸುಳ್ಯ ರಾಮ ಮಂದಿರ ದಲ್ಲಿ ಗಣೇಶೋತ್ಸವ, ಗೀತಾ ದರ್ಶನ ವಿಶೇಷ ಕಾರ್ಯಕ್ರಮ

0

 

ಸುಳ್ಯ ಶ್ರೀ ರಾಂಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವವವು ಆ.31 ರಂದು ನಡೆಯಲಿರುವುದು.
ಬೆಳಗ್ಗೆ ಗಣಪತಿ ಹವನವಾಗಿ ಬಳಿಕ ಕೃಷ್ಣ ಪ್ರಜ್ಞಾ ಟ್ರಸ್ಟ್ ವತಿಯಿಂದ ಗೀತಾದರ್ಶನ ವಿಶೇಷ ಕಾರ್ಯಕ್ರಮ ದಾಸ ಸಾಹಿತ್ಯ ಸಹಯೋಗದಲ್ಲಿ ನಡೆಯಲಿದೆ.ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು. ಅಪರಾಹ್ನ ಗಂಟೆ 2.00 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಶೇಖರ ಪೆರಾಜೆ ಸಂಯೋಜನೆಯಲ್ಲಿ ದಕ್ಷಯಜ್ಞ ಕುಶಲವರ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನ ವಾಗಲಿದೆ.ರಾತ್ರಿ ಗಂಟೆ 7.00 ರಿಂದ ಭಜನಾ ಕಾರ್ಯಕ್ರಮ ನಡೆದು ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಯೊಂದಿಗೆ ಉತ್ಸವ ಸಂಪನ್ನವಾಗಲಿರುವುದಾಗಿ ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.