ಕೊಲ್ಲಮೊಗ್ರು – ಹರಿಹರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಶೇಖರ ಅಂಬೆಕಲ್ಲು

0

 

ಕೊಲ್ಲಮೊಗ್ರು ಹರಿಹರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಶೇಖರ ಅಂಬೆಕಲ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ.27 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ  ಆಯ್ಕೆ ಮಾಡಲಾಯಿತು.

 

ಶೇಖರ್ ಅವರನ್ನು ನಿರ್ದೇಶಕ ವಿನೂಪ್ ಮಲ್ಲಾರ ಸೂಚಿಸಿ ಮಣಿಕಂಠ ಕೊಳಗೆ ಅನುಮೋದಿಸಿದರು. ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ನಿರ್ದೇಶಕರುಗಳಾದ ವಿಜಯ ಕಜ್ಜೋಡಿ, ವಿಜಯ ಕೂಜುಗೋಡು,ತಾರಾನಾಥ ಮುಂಡಾಜೆ, ಗಿರೀಶ್ ಕಟ್ಟೆಮನೆ, ಮೋನಪ್ಪ ಕೊಳಗೆ, ಬೊಳಿಯ ಬೆಂಡೋಡಿ, ರಾಜೇಶ್‌ ಪರಮಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಮತ್ತಿತರರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದದಂತೆ ಮಣಿಕಂಠ ಕೊಳಗೆ ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕಾರಣ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಶೇಖರ ಅಂಬೆಕಲ್ಲು ಅವರು ಕೊಲ್ಲಮೊಗ್ರು ಗ್ರಾ.ಪಂ ನ ಮಾಜಿ ಸದಸ್ಯ.