ಎಡಮಂಗಲ ಶಾಲೆಗೆ ದಾನಿಗಳಿಂದ ಕೊಡುಗೆ ಹಸ್ತಾಂತರ

0

 

ಎಡಮಂಗಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಕೊಡುಗೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಆಗಸ್ಟ್ 27ರಂದು ನಡೆಯಿತು.
ಎಡಮಂಗಲ ಗ್ರಾಮದ ಬಳಕ್ಕಬೆ ಶ್ರೀಮತಿ ಶಶಿಕಲಾ ಮೋಹನ್ ಕುಮಾರ್  ಮತ್ತು ಮನೆಯವರು ಶಾಲೆಗೆ 26000 ರೂ. ಮೌಲ್ಯದ ಕಂಪ್ಯೂಟರನ್ನು ಅವರ ಪುತ್ರ ಭರತ್ ಕೊಡುಗೆಯಾಗಿ ಹಸ್ತಾಂತರಿಸಿದರು.
ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 20000 ರೂ. ಮೌಲ್ಯದ ಪ್ರಿಂಟರ್ ಜೆರಾಕ್ಸ್ ಮೆಷಿನ್ ನ್ನು ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಮೇಶ್ ದೋಳ್ತಿಲ ಬ್ಯಾಂಕಿನ ವತಿಯಿಂದ ಹಸ್ತಾಂತರಿಸಿದರು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಶೀನಪ್ಪ ನಾಯ್ಕ ಮುಳಿಯ ಮತ್ತು ಉಪಾಧ್ಯಕ್ಷೆ ಶ್ರೀಮತಿ ಚೈತ್ರಾ ಉದಲಡ್ಕ ಹಾಗೂ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಅಂಬೆಕಲ್ಲುರವರು ಕೊಡುಗೆಗಳನ್ನು ಶಾಲೆಯ ಪರವಾಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಯವರು, ಪೋಷಕರು, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಇದ್ದರು.