ಐವರ್ನಾಡಿನ ದೇರಾಜೆಯಲ್ಲಿ ರಂಜಿಸಿದ ಕೆಸರ್ ಡ್ ಒಂಜಿ ದಿನ

0

 

ಕೆಸರಿನಲ್ಲಿ ಮುಳುಗೆದ್ದು, ನಲಿದಾಡಿ ಖುಷಿಪಟ್ಟ ಜನ

ಐವರ್ನಾಡಿನ ಗೆಳೆಯರ ಬಳಗ ದೇರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಆ.28 ರಂದು ನಡೆಯಿತು.

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ.ಸದಸ್ಯರಾದ ಅರ್ಚಕ ಪದ್ಮನಾಭ ಭಟ್ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ 
ಗೆಳೆಯರ ಬಳಗದ ಅಧ್ಯಕ್ಷ ನಂದಕುಮಾರ ಬಾರೆತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಐವರ್ನಾಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಸದಸ್ಯರಾದ ದೇವಿದಾಸ ಕತ್ಲಡ್ಕ, ದಾಸಪ್ಪ ಕೋಡ್ತೀಲು, ವಾಮನ ಗೌಡ ಕೋಂದ್ರಮಜಲು, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರು,ಗೆಳೆಯರ ಬಳಗದ ಗೌರವಾಧ್ಯಕ್ಷ ದೇವಿಪ್ರಸಾದ್ ಎಸ್.ಎನ್.,ಕಾರ್ಯದರ್ಶಿ ಚೇತನ್ ಬೋಳುಗುಡ್ಡೆ, ಗ್ರಾ.ಪಂ.ಸದಸ್ಯೆ ಸುಜಾತ ಪವಿತ್ರಮಜಲು, ಮಾಧವ ಭಟ್ ಶೃಂಗೇರಿ, ರಾಮಚಂದ್ರ ಗೌಡ ಶೇಣಿ, ಮತ್ತಿತರರು ಉಪಸ್ಥಿತರಿದ್ದರು.


ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.

ಪುರುಷರಿಗೆ ಕಬಡ್ಡಿ ಪಂದ್ಯಾಟ, 100 ಮೀ ಓಟ, 3 ಕಾಲಿನ ಓಟ (2 ಜನ)ಮಡಿಕೆ ಒಡೆಯುವುದು,ಸಂಗೀತ ಕುರ್ಚಿ, ಹ್ಯಾಂಡ್ ಬಾಲ್/ವಾಲಿಬಾಲ್ ನಡೆಯಿತು.
ಮಹಿಳೆಯರಿಗೆ ಹಗ್ಗಜಗ್ಗಾಟ ( 5 ಜನರ ತಂಡ) ಹ್ಯಾಂಡ್ ಬಾಲ್,100 ಮೀ ಓಟ,ಮಡಿಕೆ ಒಡೆಯುವುದು, ಚಮಚದ ಚಮತ್ಕಾರ,ಸಂಗೀತ ಕುರ್ಚಿ ಸ್ಪರ್ಧೆ ನಡೆಯಿತು.
ಮಕ್ಕಳಿಗೆ ಆಟೋಟ ಸ್ಪರ್ಧೆ ಗಳು,ದಂಪತಿಗಳಿಗೆ ಹಾಳೆಯಲ್ಲಿ ಜಾರುಬಂಡಿ,ಉಪ್ಪ ಮುಡಿ ನಡೆಯಿತು.

ಗಂಡಸರು,ಮಹಿಳೆಯರು,ಮಕ್ಕಳು ನೂರಾರು ಜನರು ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಬೃಹತ್ ಗದ್ದೆಯಲ್ಲಿ ನಡೆದ ಕ್ರೀಡಾಕೂಟವನ್ನು ನೋಡಲು ಜನರು ಗದ್ದೆಯ ಸುತ್ತಲೂ ಸೇರಿದ್ದು ನೋಡುಗರಿಗೆ ಅತ್ಯಾಕರ್ಷಕವಾಗಿತ್ತು.
ಗೆಳೆಯರ ಬಳಗದ ಎಲ್ಲಾ ಸದಸ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ್ದರು.
ಅನಿಲ್ ಬಾಂಜಿಕೋಡಿ ಮತ್ತಿತರರು ಕ್ರೀಡಾಕೂಟದ ಕಾರ್ಯಕ್ರಮ ನಿರೂಪಿಸಿದರು.