ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಸಹಾಯಕ ಅರ್ಚಕರಿಂದ ಭೂದಾನ

0

ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಾಯಕ ಅರ್ಚಕರಾದ ಬಿ. ಕೃಷ್ಣಕುಮಾರ್ ಭಟ್ ಇವರು ದೇವಾಲಯಕ್ಕೆ. 0.83 ಎಕರೆ ಅಡಿಕೆ ತೋಟವನ್ನು ದಾನವಾಗಿ ನೀಡಿರುತ್ತಾರೆ. ಇತ್ತೀಚೆಗೆ ಅದರ ದಾಖಲೆಗಳ ಹಸ್ತಾಂತರ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ಕಿಶೋರ್ ಕುಮಾರ್ ಕೂದಿಗೋಡು, ಚಂದ್ರಹಾಸ ಶಿವಾಲ, ಭವಾನಿ ಶಂಕರ ಪೈಲಾಜೆ, ಚಂದ್ರಶೇಖರ ಕೆ ಕೆ ಕಿರಿಭಾಗ, ರೇಷ್ಮಾ ಪ್ರಕಾಶ್ ಕಟ್ಟೆಮನೆ, ಜ್ಯೋತಿ ಕಳಿಗೆ, ದೇವಸ್ಥಾನ ಕಛೇರಿ ನಿರ್ವಾಹಕ ಲೋಕನಾಥ ಕರಿಭಾಗ ಮತ್ತಿತರರು ಉಪಸ್ಥಿತರಿದ್ದರು.