ನಾಳೆ ಬೆಳಿಗ್ಗೆ 9. 30 ರಿಂದ 11 ಗಂಟೆಯವರೆಗೆ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ ಇಲ್ಲ

0

 

ಸುಳ್ಯ ನಗರ ದಲ್ಲಿ ಆಗಸ್ಟ್ 29ರಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಯನ್ನು ವಾಹನ ಮೆರವಣಿಗೆಯಲ್ಲಿ ಸ್ವಾಗತಿಸುವ ಹಿನ್ನೆಲೆಯಲ್ಲಿ ಪೂರ್ವಾಹ್ನ 9.30ರಿಂದ 11.00ರ ತನಕ ನಗರದ ಮುಖ್ಯರಸ್ತೆಯಲ್ಲಿ ಕಾಯರ್ತೋಡಿ ವಿಷ್ಣು ಸರ್ಕಲ್ ನಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ (ಜ್ಯೋತಿ ಸರ್ಕಲ್ ) ತನಕ ವಾಹನ ನಿಲುಗಡೆ ಮಾಡದಂತೆ ನಗರ ಪಂಚಾಯತ್ ವತಿಯಿಂದ ಸೂಚಿಸಲಾಗಿದೆ.

ವಾಹನ ನಿಲುಗಡೆ ಮಾಡುವವರು ಚೆನ್ನಕೇಶವ ದೇವಸ್ಥಾನ ಮೈದಾನ, ಎಪಿಎಂಸಿ ಪ್ರಾಂಗಣ ಗಳನ್ನು ಬಳಸಿಕೊಳ್ಳಲು ವಿನಂತಿಸಲಾಗಿದೆ. ಅಲ್ಲದೆ ಪಂಚಾಯತ್ ಬಸ್ ನಿಲ್ದಾಣದಲ್ಲಿ 9.30ರಿಂದ ನಾಟಕ ಪ್ರದರ್ಶನ ಹಾಗೂ 10.30ಕ್ಕೆ ಪ್ರತಿಮೆ ಆಗಮನ ಇರುವುದರಿಂದ ಪಂಚಾಯತ್ ಬಸ್ ನಿಲ್ದಾಣದಲ್ಲಿ 11.00ಗಂಟೆಯ ತನಕ ವ್ಯಾನ್ ಹಾಗೂ ಬಸ್ ಗಳವರು ವಾಹನ ಗಳನ್ನು ನಿಲ್ಲಿಸದೆ ಸಹಕರಿಸಬೇಕಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ   ಹಾಗೂ ಮುಖ್ಯಾಧಿಕಾರಿ  ಸುಧಾಕರ್ ತಿಳಿಸಿದ್ದಾರೆ.