ಬಳ್ಪ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ,ನೂತನ ಯುವಕ ಮಂಡಲದ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ

0

 

ವಿಕ್ರಮ ಯುವಕ ಮಂಡಲ ಬಳ್ಪ, ಶ್ರೀ ಧರ್ಮ ಶಾಸ್ತಾವು ಜಭನಾ ಮಂಡಳಿ ಬಳ್ಪ
ಇವುಗಳ ಸಂಯುಕ್ತ ಆಶ್ರಯದಲ್ಲಿ 18 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆ. 28ರಂದು ಬಳ್ಪ ವಿಕ್ರಮ ಯುವಕ ಪಮಂಡಲದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಉಧ್ಟಾಟನೆಯನ್ನು ಪದ್ಮನಾಭ ರೈ ಅಗೋಳಿಬೈಲುಗುತ್ತು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಮಾಜಿ ನಿರ್ದೇಶಕ ಆನಂದ ಚೆನ್ನಕಜೆ, ಬಳ್ಪ ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಸ.ಉ.ಹಿ.ಪ್ರಾ. ಶಾಲೆ ಬಳ್ಪ ಇದರ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಬುಡೆಂಗಿ, ಧರ್ಮಶಾಸ್ತಾವು ಭಜನಾ ಮಂಡಳಿಯ ಅಧ್ಯಕ್ಷ ಸುರೇಶ್ ಆಲ್ಕಬೆ, ದೈಹಿಕ ಶಿಕ್ಷಕ ಪ್ರದೀಪ್ ಹೊಪ್ಪಾಳೆ, ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ವೈ.ಟಿ, ಅಧ್ಯಕ್ಷ ಶಶಿಧರ ಎಣ್ಣೆಮಜಲು ಹಾಗೂ ಕಾರ್ಯದರ್ಶಿ ಗಗನ್ ಕಟ್ಟೆಮನೆ ಉಪಸ್ಥಿತಿತರಿದ್ದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ನೂತನ ಪದಾಧಿಕಾರಿಗಳಿಗೆ ಪದಗ್ರಹಣವನ್ನು ಆನಂದ ಚೆನ್ನಕಜೆ ನೆರವೇರಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮೊಸರು ಕುಡಿಕೆ, ಹಗ್ಗ ಜಗ್ಗಾಟ, ತ್ರೋಬಾಲ್ ಲಗೋರಿ ಹಾಗೂ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗ್ರಾ. ಪಂ. ಅಧ್ಯಕ್ಷರ ಶ್ರೀಮತಿ ಶಶಿಕಲಾ ಸೂಂತಾರು, ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಪಠೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಪುರುಷೋತ್ತಮ ಅಮ್ಮಣ್ಣಾಯ ಮೂಡ್ನೂರು, ಜಯರಾಮ ಆಲ್ಕಬೆ, ರಮಾನಂದ ಎಣ್ಣೆಮಜಲು, ಆನಂದ ಚೆನ್ನಕಜೆ, ಭಾಸ್ಕರ ಕೊರಪ್ಪಣೆ, ಪ್ರಸನ್ನ ವೈ.ಟಿ ಉಪಸ್ಥಿತಿತರಿದ್ದರು. ಬಳ್ಪದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ ಪಿ. ರಾಮಕೃಷ್ಣ ಭಟ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನವನ್ನು ಪುರುಷೋತ್ತಮ ಅಮ್ಮಣ್ಣಾಯ ಮೂಡ್ನೂರು ನೆರವೇರಿಸಿದರು. ಪ್ರಸನ್ನ ವೈ.ಟಿ ಸನ್ಮಾನ ಪತ್ರ ವಾಚಿಸಿದರು. ಕು. ಭವಿಕಾ ಕುಳ ಪ್ರಾರ್ಥಿಸಿ ಗಗನ್ ಕಟ್ಟೆಮನೆ ಸ್ವಾಗತಿಸಿ, ಮಹೇಶ್ ಗೆಜ್ಜೆ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಜನೀಶ್ ಕುಳ ನಿರ್ವಹಿಸಿದರು.