ದೊಡ್ಡಕುಮೇರಿ ದೈವಸ್ಥಾನಕ್ಕೆ ಧ. ಗ್ರಾ. ಯೋಜನೆಯಿಂದ ಕಸದ ಬುಟ್ಟಿ ಕೊಡುಗೆ

0

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತೊಡಿಕಾನದ ದೊಡ್ಡಕುಮೇರಿ ದೈವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಕಸದ ಬುಟ್ಟಿಯ ಹಸ್ತಾಂತರ ಆ. 31 ರಂದು ನಡೆಯಿತು.

ಯೋಜನೆಯ ಸೇವಾಪ್ರತಿನಿಧಿ ಐತ್ತಪ್ಪ ಬಾಜಿನಡ್ಕ , ಒಕ್ಕೂಟದ ಅಧ್ಯಕ್ಷ ಜನಾರ್ದನ ಬಾಳೆಕಜೆ , ಜತೆ ಕಾರ್ಯದರ್ಶಿ ದೇವಪ್ಪ ಹೈದಂಗೂರು , ಮಾಜಿ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ರವರು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೇಪು ದೊಡ್ಡಕುಮೇರಿ , ಕಾರ್ಯದರ್ಶಿ ಸುರೇಶ್ ಡಿ. ಎ , ರಾಜು ಮೇಸ್ತ್ರಿ ಇವರಿಗೆ ಹಸ್ತಾಂತರಿಸಿದರು. ದೈವಸ್ಥಾನ ಸಮಿತಿಯ ಚೌಕಾರು ದೊಡ್ಡಕುಮೇರಿ, ಸಂದೀಪ್ , ನಿತೇಶ್ ಮತ್ತಿತರರಿದ್ದರು.