ಹಳೆಗೇಟು : 39 ನೇ ವರ್ಷದ ಶ್ರೀ ಗಣೇಶೋತ್ಸವದ ಉತ್ಸವಕ್ಕೆ ಚಾಲನೆ

0

ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಆಶ್ರಯದಲ್ಲಿ ಆ.31 ರಿಂದ ಸೆ.2 ರ ತನಕ ಹಳೆಗೇಟು ವಸಂತಕಟ್ಟೆ ವಠಾರದಲ್ಲಿ ನಡೆಯಲಿರುವ 39 ನೇ ವರ್ಷದ ಗಣೇಶೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.


ಬೆಳಗ್ಗೆ ಪುರೋಹಿತ್ ನಟರಾಜ್ ಭಟ್ ರವರ ನೇತೃತ್ವದಲ್ಲಿ ಗಣಪತಿ ಹೋಮ, ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಶಿವನಾಥ್ ರಾವ್,ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಚಿತ್ತರಂಜನ್, ಉಪಾಧ್ಯಕ್ಷ ಬಾಲ ಗೋಪಾಲ ಸೇರ್ಕಜೆ, ಗೌರವಾಧ್ಯಕ್ಷ ಪುಂಡರಿಕ ಭಟ್, ಹಾಗೂ ಸಂಘದ ಸದಸ್ಯರುಗಳು, ಸ್ಥಳೀಯ ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 2ರ ತನಕ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸೆಪ್ಟೆಂಬರ್ 2 ರಂದು ಸಂಜೆ 4 ಗಂಟೆಗೆ ವೈಭವದ ಶೋಭಾ ಯಾತ್ರೆಯ ಮೂಲಕ ಸುಳ್ಯ ನಗರದಾದ್ಯಂತ ಸಾಗಿ ಪಯಶ್ವಿನಿ ನದಿಯಲ್ಲಿ ವಿಸರ್ಜನೆಗೊಳಿಸಿ ಗಣೇಶೋತ್ಸವ ಕಾರ್ಯಕ್ರಮ ಸಮಾರೋಪ ಗೊಳ್ಳಲಿದೆ.